ಲಂಡನ್-ಅಮೃತಸರ ನೇರ ವಿಮಾನಕ್ಕಾಗಿ ಅಭಿಯಾನ
Update: 2018-04-26 18:00 GMT
ಲಂಡನ್, ಎ. 26: ಲಂಡನ್ ಮತ್ತು ಪಂಜಾಬ್ನ ಅಮೃತಸರ ನಡುವೆ ನೇರ ವಿಮಾನಕ್ಕಾಗಿ ಅಭಿಯಾನವೊಂದನ್ನು ಬ್ರಿಟನ್ನ ಮೊದಲ ಪೇಟಧಾರಿ ಸಿಖ್ ಸಂಸದ ತನ್ಮನ್ಜೀತ್ ಸಿಂಗ್ ದೇಸಿ ಆರಂಭಿಸಿದ್ದಾರೆ.
ಇದು ಬ್ರಿಟನ್ನಲ್ಲಿರುವ ಪಂಜಾಬಿಗಳ ದೀರ್ಘಕಾಲೀನ ಬೇಡಿಕೆಯಾಗಿದೆ.
ಅಭಿಯಾನದಲ್ಲಿ ಲೇಬರ್ ಪಕ್ಷದ ಸಂಸದನ ಜೊತೆಗೆ ಎರಡು ಸರಕಾರೇತರ ಸಂಘಟನೆಗಳೂ ಕೈಜೋಡಿಸಿವೆ.