ಇಬ್ಬರು ಐಎಎಸ್ ಅಧಿಕಾರಿಗಳ ವರ್ಗಾವಣೆ
Update: 2018-04-27 17:42 GMT
ಬೆಂಗಳೂರು, ಎ. 27: ರಾಜ್ಯ ಸರಕಾರ ಇಬ್ಬರು ಐಎಎಸ್ ಅಧಿಕಾರಿಗಳನ್ನು ಅವರ ಹೆಸರಿನ ಮುಂದಿನ ಸೂಚಿತ ಸ್ಥಳಕ್ಕೆ ತಕ್ಷಣದಿಂದಲೇ ನಿಯೋಜನೆಗೊಳ್ಳುವಂತೆ ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ.
ಅನಿಲ್ ಕುಮಾರ್ ಟಿ.ಕೆ.-ವಿಭಾಗೀಯ ಆಯುಕ್ತ ಬೆಳಗಾವಿ ವಿಭಾಗ, ಬೆಳಗಾವಿ ಹಾಗೂ ಹೇಮಲತಾ ಪಿ.-ವಿಭಾಗೀಯ ಆಯುಕ್ತ ಮೈಸೂರು ವಿಭಾಗ, ಮೈಸೂರು ಇಲ್ಲಿಗೆ ವರ್ಗಾವಣೆ ಮಾಡಿ ಶುಕ್ರವಾರ ಆದೇಶ ಹೊರಡಿಸಲಾಗಿದೆ.