ದಾವಣಗೆರೆ: ಅಮಿತ್ ಶಾ ರೋಡ್ ಶೋ ವೇಳೆ ಮೂಲೆ ಸೇರಿದ ಭಾರತ ಮಾತೆ, ಅಂಬೇಡ್ಕರ್ ರ ಭಾವಚಿತ್ರಗಳು

Update: 2018-04-29 12:13 GMT

ದಾವಣಗೆರೆ,ಎ.29: ಬಿಜೆಪಿ ರಾಷ್ಟ್ರೀಯಾಧ್ಯಕ್ಷ ಅಮಿತ್ ಶಾ ರ ರೋಡ್ ಶೋ ವೇಳೆ ಭಾರತ ಮಾತೆ ಹಾಗೂ ಸಂವಿಧಾನ ಶಿಲ್ಪಿ ಡಾ. ಬಿ.ಆರ್ ಅಂಬೇಡ್ಕರ್ ರ ಭಾವಚಿತ್ರಗಳು ಮೂಲೆ ಸೇರಿದೆ ಎನ್ನಲಾದ ದೃಶ್ಯಗಳು ಸಾಮಾಜಿಕ ಜಾಲ ತಾಣದಲ್ಲಿ ವೈರಲ್ ಆಗಿದೆ.

ಕರ್ನಾಟಕ ಪ್ರವಾಸದಲ್ಲಿರುವ ಅಮಿತ್ ಶಾ ರ ಇಂದಿನ ದಾವಣಗೆರೆಯ ರೋಡ್ ಶೋ ಹಿನ್ನೆಲೆಯಲ್ಲಿ ನಗರದ ರಾಮಂಡ ಕೋ ವೃತ್ತದಲ್ಲಿ ವಿಶೇಷ ವ್ಯವಸ್ಥೆ ಮಾಡಲಾಗಿತ್ತು. ಅದರಂತೆ ಬಸವಣ್ಣ, ಶಿವಾಜಿ, ರಾಮನ ಪೋಟೋಗಳನ್ನು ವೃತ್ತಕ್ಕೆ ಹಾಕಲಾಗಿತ್ತು. ಆದರೆ ಇದೇ ಸ್ಥಳದಲ್ಲಿ ಹಾಕಲು ತಂದಿದ್ದಾರೆ ಎನ್ನಲಾದ ಡಾ. ಬಿ.ಆರ್ ಅಂಬೇಡ್ಕರ್ ಹಾಗೂ ಭಾರತ ಮಾತೆಯ ಭಾವಚಿತ್ರ ರಸ್ತೆಯ ಪಕ್ಕದಲ್ಲಿ ಇಟ್ಟಿದ್ದು ಕಂಡು ಬಂದಿದೆ. ವೃತ್ತಕ್ಕೆ ಹಾಕಲು ತಂದ ಈ ಭಾವಚಿತ್ರಗಳು ಮೂಲೆಗೆ ಸೇರಿದ ಬಗ್ಗೆ ಫೋಟೋ ಹಾಗೂ ವೀಡಿಯೂ ಸಾಮಾಜಿಕ ಜಾಲ ತಾಣದಲ್ಲಿ ವೈರಲ್ ಆಗಿದ್ದು, ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ 

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News