ರಾಜ್ಯಕ್ಕೆ ಪ್ರಾದೇಶಿಕ ಪಕ್ಷ ಬೇಕೋ ಬೇಡವೋ ಎಂದು ಜನ ತೀರ್ಮಾನ ಮಾಡುತ್ತಾರೆ: ಎಚ್.ಡಿ.ದೇವೇಗೌಡ
ಮೈಸೂರು,ಎ.29: ಈ ರಾಜ್ಯಕ್ಕೆ ಪ್ರಾದೇಶಿಕ ಪಕ್ಷದ ಅಗತ್ಯ ಇದೆ. ನಮ್ಮ ಪಕ್ಷ ಜಾತ್ಯಾತೀತ ಪಕ್ಷ. ಆದರೆ ಈ ರಾಜ್ಯಕ್ಕೆ ಪ್ರಾದೇಶಿಕ ಪಕ್ಷ ಬೇಕೋ ಬೇಡವೋ ಎಂದು ಜನ ತೀರ್ಮಾನ ಮಾಡುತ್ತಾರೆ ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಹೇಳಿದರು.
ನಗರದ ಖಾಸಗಿ ಹೋಟೆಲ್ ನಲಿ ರವಿವಾರ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಪ್ರಚಾರ ಮಾಡುವ ವಿಚಾರವಾಗಿ ಮಾತನಾಡುತ್ತಾ, ಕುಮಾರಸ್ವಾಮಿ ಒಂದು ಪಟ್ಟಿ ಮಾಡಿದ್ದಾರೆ. ಅದರಲ್ಲಿ ಚಾಮುಂಡೇಶ್ವರಿ ಕ್ಷೇತ್ರ ಸೇರಿಸಿದ್ದಾರೆ. ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಜಿ.ಟಿ.ದೇವೇಗೌಡನೆ ಒಳ್ಳೆ ಪೈಲ್ವಾನ್. ಎದುರಾಳಿ ಸೋಲಿಸಲು ಇವನೇ ಸಾಕು ಎಂದರು. ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಗೆಲ್ಲೋದು ಸಿದ್ದರಾಮಯ್ಯರಿಗೆ ಕಷ್ಟ ಇದೆ. ಹೀಗಾಗಿ ಬಾದಾಮಿಗೆ ಹೋಗಿದ್ದಾರೆ. ಯಾಕೆ ಕಷ್ಟ ಇದೆ ಅಂದರೆ ನುಡಿದಂತೆ ನಡೆದಿದ್ದೆವೆ ಅಂತಾರೆ. ಅವರು ಎಷ್ಟು ಕೆಟ್ಟ ಆಡಳಿತ ಕೊಟ್ಟಿದ್ದಾರೆ ಅನ್ನೊದಕ್ಕೆ ನನ್ನ ಬಳಿ ಉದಾಹರಣೆಗಳಿವೆ ಎಂದರು.
ಐಟಿ ರೈಡ್ ಗೂ ಚುನಾವಣೆಗೂ ಸಂಬಂಧ ಇಲ್ಲ. ಅವರ ಕೆಲಸ ಅವರು ಮಾಡುತ್ತಿದ್ದಾರೆ. ಬಿಜೆಪಿ ಕಾಂಗ್ರೆಸ್ ಗೆ ಈಗ ಇನ್ನಿಲ್ಲದ ಪ್ರೀತಿ ಬಂದಿದೆ. ಕುಮಾರಸ್ವಾಮಿ ವರ್ಚಸ್ಸಿನಿಂದ ಹತಾಶರಾಗಿ ನಮ್ಮನ್ನು ಮುಸ್ಲಿಂ ವಿರೋಧಿಗಳು ಅಂತಾ ಬಿಂಬಿಸಲಾಗ್ತಿದೆ. ದತ್ತಪೀಠ ಗಲಾಟೆ, ಈದ್ಗಾ ಮೈದಾನ ವಿವಾದ ಯಾವಾಗ ಆಗಿದ್ದು? ಎಸ್.ಎಂ.ಕೃಷ್ಣ ಮುಖ್ಯಮಂತ್ರಿಯಾಗಿದ್ದಾಗ ಹಾಗೂ ಟಿ.ಬಿ.ಚಂದ್ರೇಗೌಡ ಕಾನೂನು ಸಚಿವರಾಗಿದ್ದಾಗ ದತ್ತಪೀಠದಲ್ಲಿ ಹೋಮ ಹವನ ಮಾಡಿರಲಿಲ್ಲವೇ? 1983 ರಲ್ಲಿ ಸಿದ್ದರಾಮಯ್ಯ ಎಲ್ಲಿ ಇದ್ದರು? ಕನ್ನಡ ಕಾವಲು ಸಮಿತಿ ಅಧ್ಯಕ್ಷರಾಗಿದ್ದ ಸಿದ್ದು. ನಿಮ್ಮನ್ನ ಲಿಪ್ಟ್ ಮಾಡಿದ್ದು ಯಾರು ? ಎಂದು ಪ್ರಶ್ನಿಸಿದರು.
ನಿಮ್ಮಪ್ಪನ್ನ ಆಣೆ ನೀವೂ ಅಧಿಕಾರಕ್ಕೆ ಬರೋಲ್ಲ ಎಂಬ ಸಿಎಂ ಹೇಳಿಕೆ ವಿಚಾರವಾಗಿ ಮಾತನಾಡಿದ ಅವರು, ನಾನು ಅವರನ್ನು ಪ್ರೀತಿಯಿಂದ ಸಿದ್ದರಾಮು ಎಂದು ಕರೆದಿದ್ದಕ್ಕೆ ಈಗ ಅವರು ಕೊಡುತ್ತಿರುವ ಬೆಲೆ ಇದು ಎಂದು ಮಾರ್ಮಿಕವಾಗಿ ನುಡಿದರು. ಇದೀಗ ಆಣೆ ಕಾಲ ಹೋಯ್ತು. ಈಗ ನಏನಿದ್ರು ನೋಟ್ ಕಾಲ. ಅಂಬರೀಶ್ ಅವರನ್ನು ರಾಜಕೀಯಕ್ಕೆ ತಂದವನೇ ನಾನು. ಅವರು ಕಾವೇರಿ ಹೋರಾಟದಲ್ಲಿ ತಮ್ಮ ಸ್ಥಾನಕ್ಕೆ ರಾಜಿನಾಮೇ ಕೊಟ್ಟಿದ್ದರು ಎಂದ ಅವರು, ರಾಹುಲ್ ಗಾಂಧಿ ರಾಜ್ಯಕ್ಕೆ ಬಂದ ತಕ್ಷಣ ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತಾ ಎಂದು ವ್ಯಂಗ್ಯವಾಡಿದರು.