ಸೋಮವಾರಪೇಟೆ : ಬಿರುಗಾಳಿ ಮಳೆಗೆ ಹಾನಿ

Update: 2018-05-03 18:18 GMT

ಸೋಮವಾರಪೇಟೆ,ಮೇ.3:ಪಟ್ಟಣ ಸುತ್ತಮುತ್ತ ಗುಡುಗು ಸಿಡಿಲು ಸಹಿತ ಬಿರುಗಾಳಿ ಮಳೆ ಬಿದ್ದಿದ್ದು ಅಲ್ಲಲ್ಲಿ ಹಾನಿ ಸಂಭವಿಸಿದೆ.

ಸಿಡಿಲಿಗೆ ಪಟ್ಟಣ ಪಂಚಾಯತ್ ನ ಏಳು ಕಂಪ್ಯೂಟರ್‍ ಗಳಿಗೆ ಹಾನಿಯಾಗಿದೆ. ಕಂಪ್ಯೂಟರ್‍ನಲ್ಲಿ ಕೆಲಸ ನಿರ್ವಹಿಸುತ್ತಿದ್ದ ಸಂದರ್ಭ ಡ್ಯೂಮ್‍ಟಾಪ್‍ನಿಂದ ಹೊರಬಂದ ಬೆಳಕಿನಿಂದ ಭಯಗೊಂಡ ರೆಹಮತ್ ಎಂಬ ಸಿಬ್ಬಂದಿ ಮೂರ್ಛೆ ಹೋಗಿದ್ದಾರೆ. ನಂತರ ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ, ಹೆಚ್ಚಿನ ಚಿಕಿತ್ಸೆಗೆ ಮಡಿಕೇರಿ ಕರೆದೊಯ್ಯಲಾಗಿದೆ. 

ಕಾರೇಕೊಪ್ಪ ಬಸವನಹಳ್ಳಿ ಗ್ರಾಮದ ಸತೀಶ್ ಎಂಬವರ ಮನೆಯ ಮೇಲೆ ತೆಂಗಿನ ಮರಬಿದ್ದು ಹಾನಿಯಾಗಿದೆ. ಅದೃಷ್ಟವಶಾತ್ ಮನೆಯೊಳಗಿದ್ದವರಿಗೆ ತೊಂದರೆಯಾಗಿಲ್ಲ. ಬೇಳೂರುಬಾಣೆಯ ಶೇಖರ್ ಎಂಬವರ ಮನೆಯ ಶೀಟ್ ಹಾರಿಹೋಗಿದೆ. ರಸ್ತೆಯಲ್ಲಿ ಅಲ್ಲಲ್ಲಿ ಚಿಕ್ಕಪುಟ್ಟ ಮರಗಳು  ಧರೆಗುರುಳಿವೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News