ಎಸ್.ಡಿ.ಪಿ.ಐ. ಅಭ್ಯರ್ಥಿ ಅಬ್ದುಲ್ ಮಜೀದ್ ಮತದಾನ

Update: 2018-05-12 09:31 GMT

ಮೈಸೂರು, ಮೇ 12: ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್.ಡಿ.ಪಿ.ಐ.) ನರಸಿಂಹರಾಜ ವಿಧಾನಸಭಾ ಕ್ಷೇತ್ರ ಅಭ್ಯರ್ಥಿ ಅಬ್ದುಲ್ ಮಜೀದ್ ಕುಟುಂಬಸ್ಥರ ಜೊತೆಗೆ ರಾಜೀವನಗರದ ಬಾಬು ಜಗಜೀವನ್ ಪ್ರೌಢ ಶಾಲೆಯಲ್ಲಿ ತನ್ನ ಮತ ಚಲಾಯಿಸಿದ್ದಾರೆ. 

ಈ ಸಂದರ್ಭ ಮಾತನಾಡಿದ ಅವರು, ನಿಮ್ಮ ಪ್ರತಿಯೊಂದು ಮತಗಳು ಈ ಸಮಾಜದ ಅಭಿವೃದ್ಧಿಗೆ ಮತ್ತು ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಗಟ್ಟಿಗೊಳಿಸಲು ಮುನ್ನುಡಿಯಾಗಲಿ ಎಂದು ಹೇಳಿದರು. ಈ ಸಂದರ್ಭ ಮಜೀದ್ ರ ಪತ್ನಿ, ಪುತ್ರಿ, ಎಸ್‍ಡಿಪಿಐ ನಗರಾಧ್ಯಕ್ಷ ಆಝಾಂ ಪಾಶಾ, ಫಾರೂಕುರ್ರಹ್ಮಾನ್ ಇದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News