×
Ad

ದಾವಣಗೆರೆ: ರಸ್ತೆ ಅಪಘಾತಕ್ಕೆ ತಂದೆ-ಮಗ ಮೃತ್ಯು

Update: 2018-05-13 16:51 IST

ದಾವಣಗೆರೆ,ಮೇ.13: ಬೈಕ್ ಗೆ ಬೊಲೆರೋ ವಾಹನ ಢಿಕ್ಕಿಯಾದ ಪರಿಣಾಮ ಬೈಕ್ ನಲ್ಲಿದ್ದ ತಂದೆ-ಮಗ ಸ್ಥಳದಲ್ಲಿಯೇ ಮೃತಪಟ್ಟ ಘಟನೆ ಚನ್ನಗಿರಿ ತಾಲೂಕಿನ ಗುಲ್ಲಹಳ್ಳಿ ಬಳಿ ನಡೆದಿದೆ.

ಮೃತರನ್ನು ಚನ್ನಗಿರಿಯ ಡಿಎಚ್ ಕೆ ಶಾಮಿಯಾನ ಮಾಲಿಕರಾದ ಸೈಯದ್ ಅಸ್ಲಂ (56) ಹಾಗೂ ಅವರ ಮಗ ಸೈಯದ್ ಅಖೀಲ್ (23 ಎಂದು ಗುರುತಿಸಲಾಗಿದೆ.

ಬೊಲೆರೋ ವಾಹನ ಚಾಲಕನನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಚನ್ನಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News