ಮೂಡಿಗೆರೆ: ಇವಿಎಂ ಮತಯಂತ್ರ ದುರುಪಯೋಗ ಆರೋಪ; ಎಸ್ಡಿಪಿಐ ಪ್ರತಿಭಟನೆ
Update: 2018-05-19 14:05 GMT
ಮೂಡಿಗೆರೆ,ಮೇ.19: ದೇಶದಲ್ಲಿ ಚುನಾವಣೆ ನಡೆಯುವಾಗ ಇವಿಎಂ ಮತಯಂತ್ರ ದುರುಪಯೋಗವಾಗುತ್ತಿದೆ ಎಂದು ಆರೋಪಿಸಿ ಎಸ್ಡಿಪಿಐ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿ ತಹಸೀಲ್ದಾರ್ ಗೆ ಮನವಿ ಸಲ್ಲಿಸಿದರು.
ನಂತರ ಎಸ್ಡಿಪಿಐ ಮುಖಂಡ ಮೊಹಮ್ಮದ್ ರಫೀಕ್ ಮಾತನಾಡಿ, ಇವಿಎಂ ಮತಯಂತ್ರ ಬಳಕೆಯನ್ನು ನಿಷೇಧಿಸಬೇಕು. ಬ್ಯಾಲೆಟ್ ಪೇಪರ್ ಮೂಲಕ ಚುನಾವಣೆ ನಡೆಸಿ, ಪ್ರಜಾಪ್ರಭುತ್ವವವನ್ನು ಉಳಿಸಬೇಕು ಎಂದು ಆಗ್ರಹಿಸಿದರು.
ಪ್ರಧಾನ ಕಾರ್ಯದರ್ಶಿ ಎಂ.ವಿ.ಶರೀಫ್, ಕಾಂಗ್ರೆಸ್ ಮುಖಂಡ ಯಾಕೂಬ್ ಗೋಣಿಗದ್ದೆ, ಜೆಡಿಎಸ್ ಮುಖಂಡ ರಿಜ್ವಾನ್, ಸದಸ್ಯರಾದ ರಿಜ್ವಾನ್ ಹುಸೇನ್, ಸಿಕಂದರ್, ಹಸೈನಾರ್, ಅಮ್ಜದ್ ಖಾನ್, ಇಮ್ರಾನ್, ಅಕ್ರಂ ಮತ್ತಿತರರು ಇದ್ದರು.