ಹನೂರು: ರಸ್ತೆ ಅಪಘಾತದಲ್ಲಿ ಬೈಕ್ ಸವಾರ ಮೃತ್ಯು

Update: 2018-05-19 14:21 GMT

ಹನೂರು,ಮೇ.19: ಲೊಕ್ಕನಹಳ್ಳಿ-ಪಿಜಿ ಪಾಳ್ಯ ಮಾರ್ಗಮಧ್ಯೆ ಬೈಕ್ ಸವಾರ ಆಯತಪ್ಪಿ ಬಿದ್ದ ಪರಿಣಾಮ ಸವಾರ ಮೃತಪಟ್ಟು, ಮತ್ತೋರ್ವ ಗಾಯಗೊಂಡ ಘಟನೆ ನಡೆದಿದೆ.

ಲೊಕ್ಕನಹಳ್ಳಿ ಗ್ರಾಮದ ಗವಿರಾಜು ಎಂಬಾತನೇ ಮೃತ ವ್ಯಕ್ತಿ. ಈತ ಪೈಂಟಿಂಗ್ ಕಾರ್ಮಿಕನಾಗಿದ್ದು, ಶುಕ್ರವಾರ ತನ್ನ ಸಹೋದ್ಯೋಗಿಯೊಡನೆ ಕೆಲಸ ನಿಮಿತ್ತ ಬೈಕ್‍ನಲ್ಲಿ ಪಿ.ಜಿ ಪಾಳಕ್ಕೆ ತೆರಳಿದ್ದನು. ಕೆಲಸ ಮುಗಿದ ಬಳಿಕ ಮನೆಗೆ ಮರಳುವಾಗ ಸಂಜೆ 7.30 ರ ವೇಳೆ ಮಾರ್ಗಮಧ್ಯೆ ಆಯತಪ್ಪಿ ಬಿದ್ದಿದ್ದಾನೆ. ಪರಿಣಾಮ ಇಬ್ಬರ ತಲೆಗೂ ತೀವ್ರ ಪೆಟ್ಟಾಗಿತ್ತು. ಬಳಿಕ ಗಾಯಾಳುವನ್ನು ಆಸ್ಪತ್ರೆಗೆ ಕರೆದೊಯ್ಯಲಾಗುತ್ತಿತ್ತು. ಆದರೆ ತೀವ್ರ ಗಾಯಗೊಂಡ ಗವಿರಾಜು ಮಾರ್ಗಮಧ್ಯೆಯೇ ಮೃತಪಟ್ಟಿದ್ದಾನೆ ಎನ್ನಲಾಗಿದೆ. 

ಗಿರೀಶ್ ಎಂಬವನನ್ನು ಬೆಂಗಳೂರಿನ ನಿಮ್ಹಾನ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲು ಮಾಡಲಾಗಿದೆ. ಈ ಸಂಬಂಧ ಹನೂರು ಪೋಲಿಸ್ ಠಾಣೆಯಲ್ಲಿ ದೂರು ದಾಖಲಾಗಿದೆ. 
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News