ಕಡೂರು: ಮಾಜಿ ಶಾಸಕ ಡಾ. ವೈ.ಸಿ ವಿಶ್ವನಾಥ್ ಅಸ್ವಸ್ಥ; ಆಸ್ಪತ್ರೆಗೆ ದಾಖಲು

Update: 2018-05-19 17:30 GMT

ಕಡೂರು,ಮೇ.19: ಮಾಜಿ ಶಾಸಕ ಡಾ. ವೈ.ಸಿ. ವಿಶ್ವನಾಥ್ ತೀವ್ರ ಅಸ್ವಸ್ಥರಾಗಿದ್ದು, ಬೆಂಗಳೂರಿನ ಅಪೋಲೊ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಾಗಿದ್ದಾರೆ ಎಂದು ತಿಳಿದುಬಂದಿದೆ.

ತಾಲೂಕಿನ ಯಳ್ಳಂಬಳಸೆಯಲ್ಲಿರುವ ಸ್ವಗೃಹದಲ್ಲಿದ್ದ ವಿಶ್ವನಾಥ್ ಗುರುವಾರ ರಾತ್ರಿ ಅಸ್ಪಸ್ಥಗೊಂಡ ಹಿನ್ನಲೆಯಲ್ಲಿ ಕಡೂರಿನ ತಮ್ಮದೇ ಆಸ್ಪತ್ರೆಯಾದ ಮಾರುತಿ ನರ್ಸೀಂಗ್ ಹೋಮ್‍ನ ಸಹೋದ್ಯೋಗಿ ಡಾ. ಉಮೇಶ್‍ರಾವ್ ಅವರ ಬಳಿ ತಪಾಸಣೆಗೆ ತೆರಳಿದರು ಎಂದು ಹೇಳಲಾಗಿದೆ. ನಂತರ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿಗೆ ಕರೆದೊಯ್ಯಲಾಯಿತು. ಅಲ್ಲಿ ಅವರು ತೀವ್ರ ಅಸ್ವಸ್ಥರಾಗಿ ಶೇಷಾದ್ರಿಪುರಂನ ಅಪೋಲೊ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದು ಸದ್ಯ ಐಸಿಯುನಲ್ಲಿ ಚಿಕಿತ್ಸೆ ನಡೆಯುತ್ತಿದೆ ಎಂದು ಡಾ. ಉಮೇಶ್‍ರಾಮ್ ಪತ್ರಿಕೆಗೆ ತಿಳಿಸಿದ್ದಾರೆ.

ಕಳೆದ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಬೆಳ್ಳಿಪ್ರಕಾಶ್ ಅವರ ಪರವಾಗಿ ಓಡಾಡಿ ಅವರ ಗೆಲುವಿಗೆ ಕಾರಣೀಭೂತರಾಗಿದ್ದ ಡಾ. ವಿಶ್ವನಾಥ್ 15 ರಂದು ನಡೆದಿದ್ದ ಬೆಳ್ಳಿಪ್ರಕಾಶ್ ಅವರ ವಿಜಯೋತ್ಸವ ಮೆರವಣಿಗೆಯಲ್ಲಿಯೂ ಪಾಲ್ಗೊಂಡಿದ್ದರು. ಬಿಜೆಪಿ ಪಕ್ಷದ ಕಾರ್ಯಕರ್ತರು ಮತ್ತು ಮುಖಂಡರು ವಿಶ್ವನಾಥ್ ಅವರು ಶೀಘ್ರವಾಗಿ ಗುಣಮುಖರಾಗಿ ಕ್ಷೇತ್ರಕ್ಕೆ ಬರಲಿ ಎಂದು ಹಾರೈಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News