ಐದು ವರ್ಷಗಳ ಕಾಲ ಮುಖ್ಯಮಂತ್ರಿಯಾಗಿ ಸ್ಥಿರ ಸರಕಾರ ನೀಡಲಿದ್ದೇನೆ: ಎಚ್.ಡಿ ಕುಮಾರಸ್ವಾಮಿ
Update: 2018-05-20 17:32 GMT
ಬೆಂಗಳೂರು,ಮೇ.20: ರಾಜ್ಯದಲ್ಲಿ ಐದು ವರ್ಷಗಳ ಕಾಲ ನಾನೇ ಪೂರ್ಣಾವಧಿಯ ಮುಖ್ಯಮಂತ್ರಿಯಾಗಿ ಸ್ಥಿರ ಸರಕಾರ ನೀಡಲಿದ್ದೇನೆ ಎಂದು ನಿಯೋಜಿತ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಹೇಳಿದರು.
ಕರ್ನಾಟಕ ಮತ್ತು ತಮಿಳುನಾಡು ಸಹೋದರರಿದ್ದಂತೆ. ಕಾವೇರಿ ನೀರಿನ ವಿಚಾರಕ್ಕೆ ಜಗಳ ಆಡುವ ಪ್ರಮೇಯವೇ ಇಲ್ಲ. ರಾಜ್ಯದ ಕಾವೇರಿ ಜಲಾನಯನ ಪ್ರದೇಶದ ಎಲ್ಲಾ ಜಲಾಶಯಗಳಲ್ಲಿ ನೀರಿಲ್ಲ. ಹೀಗಿರುವಾಗ ತಮಿಳುನಾಡಿಗೆ ನೀರು ಎಲ್ಲಿಂದ ತರಬೇಕು ಎಂದು ಪ್ರಶ್ನಿಸಿದರು.
ತಾನಿಂದು ತಿರುಚ್ಚಿಯ ಶ್ರೀರಂಗಂ ದೇವರ ದರ್ಶನ ಪಡೆದಿದ್ದು, ದೇವರು ಹಾಗೂ ಪ್ರಕೃತಿ ಕೃಪೆ ತೋರಿದರೆ, ಜಲಾಶಯಗಳು ಭರ್ತಿಯಾದರೆ ಉಭಯ ರಾಜ್ಯಗಳ ರೈತರ ನೀರಿನ ಸಮಸ್ಯೆ ಪರಿಹಾರವಾಗಲಿದೆ ಎಂದು ಹೇಳಿದರು.