ಮೈಸೂರು: ರಜನಿಕಾಂತ್ ಅಭಿನಯದ 'ಕಾಲ' ಚಿತ್ರ ಬಿಡುಗಡೆ ವಿರೋಧಿಸಿ ಧರಣಿ

Update: 2018-06-03 14:16 GMT

ಮೈಸೂರು,ಜೂ.3: ಕರ್ನಾಟಕದಲ್ಲಿ ರಜನಿಕಾಂತ್ ಅಭಿನಯದ 'ಕಾಲ' ಚಿತ್ರ ಬಿಡುಗಡೆ ಮಾಡಬಾರದು ಎಂದು ಒತ್ತಾಯಿಸಿ ಮೈಸೂರಿನಲ್ಲಿ ಕರುನಾಡ ಸೇವಕರ ಮೈಸೂರು ಘಟಕದ ವತಿಯಿಂದ ಪ್ರತಿಭಟನೆ ಮಾಡಲಾಯಿತು.

ನಗರದ ಗಾಂಧಿ ವೃತ್ತದ ಬಳಿ ರವಿವಾರ ಜಮಾಯಿಸಿದ ಕರುನಾಡ ಸೇವಕರ ಸಂಘದ ಸದಸ್ಯರು ಜಿಲ್ಲಾಧ್ಯಕ್ಷ ವಿನಯ್‍ಕುಮಾರ್ ನೇತೃತ್ವದಲ್ಲಿ ಪ್ರತಿಭಟಿಸಿದರು.

ನಟ ರಜನಿಕಾಂತ್ ವಿರುದ್ಧ ಆಕ್ರೋಶ್ ವ್ಯಕ್ತಪಡಿಸಿದ ಅವರು ಧಿಕ್ಕಾರದ ಘೋಷಣೆ ಕೂಗಿದರು. ಕರ್ನಾಟಕದಲ್ಲಿ ಕಾಲ ಚಿತ್ರವನ್ನು ಬಿಡುಗಡೆ ಮಾಡಬಾರದು ಎಂದು ಆಗ್ರಹಿಸಿದರು. ಹಾಗೂ ಮೈಸೂರಿನಲ್ಲಿ ಯಾವುದೇ ಕಾರಣಕ್ಕೂ ಚಿತ್ರವನ್ನು ಬಿಡುಗಡೆ ಮಾಡಬಾರದು ಎಂದು ಚಿತ್ರಮಂದಿರದ ಮಾಲಿಕರಿಗೆ ಮನವಿ ಮಾಡಿದರು. ನಂತರ ಮಲ್ಟಿಫ್ಲೆಕ್ಸ್, ಐನಾಕ್ಸ್ ಚಿತ್ರಮಂದಿರಗಳ ಮಾಲಿಕರಲ್ಲೂ ಮನವಿ ಮಾಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News