ಮದ್ದೂರು: ಕಾರು ಹರಿದು ದಂಪತಿ ಮೃತ್ಯು
Update: 2018-06-03 17:23 GMT
ಮದ್ದೂರು, ಜೂ.3: ತಾಲೂಕಿನ ಗೆಜ್ಜಲಗೆರೆ ಗ್ರಾಮದ ಬೆಂಗಳೂರು ಮೈಸೂರು ಹೆದ್ದಾರಿಯಲ್ಲಿ ರವಿವಾರ ತವೇರಾ ಕಾರು ಹರಿದು ದಂಪತಿ ಮೃತಪಟ್ಟಿರುವ ಘಟನೆ ನಡೆದಿದೆ.
ತಾಲೂಕಿನ ಸಾದೊಳಲು ಗ್ರಾಮದ ಚಂದ್ರಶೇಖರ್ (63), ಪತ್ನಿ ಜಯಮ್ಮ (55) ಮೃತ ದಂಪತಿ. ಬೆಳಗ್ಗೆ ಮಂಡ್ಯ ನಗರಕ್ಕೆ ಮಗಳ ಮನೆಗೆ ಹೋಗಿ ವಾಪಾಸ್ ಗ್ರಾಮಕ್ಕೆ ಬೈಕ್ನಲ್ಲಿ ಮರಳುತ್ತಿದ್ದಾಗ ಈ ಘಟನೆ ಸಂಭವಿಸಿದೆ.
ಚಂದ್ರಶೇಖರಾಚಾರಿ ಅವರ ಬೈಕ್ ಗೆಜ್ಜಲಗೆರೆ ಬಳಿ ಇನ್ನೊಂದು ಬೈಕ್ವೊಂದಕ್ಕೆ ಢಿಕ್ಕಿಯಾಗಿ ದಂಪತಿ ಕೆಳಗೆ ಬಿದ್ದಿದ್ದಾರೆ. ಈ ವೇಳೆ ಹಿಂದಿನಿಂದ ಅತಿವೇಗವಾಗಿ ಬಂದ ಕಾರು ಇವರ ಮೇಲೆ ಹರಿದು ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಪಟ್ಟಣದ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.