ಗುಂಡ್ಲುಪೇಟೆ: ಬಿದ್ದು ಸಿಕ್ಕ ನಗದು, ಬ್ಯಾಂಕ್ ದಾಖಲೆಗಳನ್ನು ಮರಳಿಸಿದ ಯುವಕ

Update: 2018-06-07 16:40 GMT

ಗುಂಡ್ಲುಪೇಟೆ,ಜೂ.07: ರಸ್ತೆ ಬದಿಯಲ್ಲಿ ಸಿಕ್ಕ ಬ್ಯಾಗಿನಲ್ಲಿದ್ದ 20 ಸಾವಿರ ರೂಪಾಯಿ ನಗದು ಹಾಗೂ ಬ್ಯಾಂಕ್ ದಾಖಲಾತಿಗಳನ್ನು ಪೊಲೀಸರಿಗೆ ಒಪ್ಪಿಸಿ ಯುವಕ ತನ್ನ ಪ್ರಾಮಾಣಿಕತೆ ಮೆರೆದಿರುವ ಘಟನೆ ಪಟ್ಟಣದಲ್ಲಿ ನಡೆದಿದೆ.

ತಾಲೂಕಿನ ಹಾಲಹಳ್ಳಿ ಗ್ರಾಮದ ಚಿಕ್ಕಬಸಪ್ಪ ಪಟ್ಟಣದ ಸಹಕಾರ ಬ್ಯಾಂಕಿನಲ್ಲಿ ಮಗಳ ಮದುವೆಗೆಂದು ಇಟ್ಟಿದ್ದ 20 ಸಾವಿರ ರೂಪಾಯಿ ನಗದು ಹಣ ಡ್ರಾ ಮಾಡಿಕೊಂಡು ತಮ್ಮ ಬ್ಯಾಗಿನಲ್ಲಿ ಹಾಕಿಕೊಂಡು ಕಾರ್ಯನಿಮಿತ್ತ ಬರಗಿ ಗ್ರಾಮಕ್ಕೆ ತೆರಳುತ್ತಿದ್ದರು. ಪ್ರಯಾಣ ಸಂದರ್ಭದಲ್ಲಿ ಬ್ಯಾಗ್ ಕೆಳಗೆ ಬಿದ್ದಿದ್ದು, ಇದೇ ಮಾರ್ಗದಲ್ಲಿ ಪಟ್ಟಣದತ್ತ ಬೈಕಿನಲ್ಲಿ ಬರುತ್ತಿದ್ದ ಚಾಮರಾಜನಗರದ ಸತೀಶ್ ಗೆ ಬ್ಯಾಗ್, 20 ಸಾವಿರ ನಗದು, ಎಟಿಎಂ ಕಾರ್ಡ್, ಪಾಸ್ ಬುಕ್ ಸೇರಿದಂತೆ ಹಲವು ದಾಖಲೆಗಳಿದ್ದ ಬ್ಯಾಗು ಸಿಕ್ಕಿದೆ. ಕೂಡಲೇ ಸತೀಶ್ ನಗದು, ಬ್ಯಾಗು ಹಾಗೂ  ಎಲ್ಲಾ ದಾಖಲೆಗಳನ್ನು ಪಟ್ಟಣ ಪೊಲೀಸ್ ಠಾಣೆಗೆ ಒಪ್ಪಿಸಿ ತಮ್ಮ ಪ್ರಾಮಾಣಿಕತೆ ಮೆರೆದಿದ್ದಾರೆ. ಮಾಲಿಕರನ್ನು ಪತ್ತೆಹಚ್ಚಿ ಠಾಣೆಗೆ ಕರೆಸಿದ ಪೊಲೀಸರು ಸತೀಶ್ ಸಮ್ಮುಖದಲ್ಲಿ ಹಣವನ್ನು ಮಾಲಿಕರಿಗೆ ಹಸ್ತಾಂತರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News