ನಾನು ಯಾವತ್ತೂ ಹಣಕ್ಕೆ ಬೆಲೆ ಕೊಟ್ಟವನಲ್ಲ: ಶಾಸಕ ಆರ್.ನರೇಂದ್ರ

Update: 2018-06-08 16:51 GMT

ಹನೂರು,ಜೂ.08: ಚುನಾವಣೆಯಲ್ಲಿ ಜಾತಿ ಬಲ ಮತ್ತು ಹಣ ಬಲಕ್ಕಿಂತ ಜನ ಬಲವೇ ಮುಂದೆ ಎಂಬುವುದನ್ನು ಸಾಬೀತು ಮಾಡಿದ ಹನೂರು ಕ್ಷೇತ್ರದ ಮತದಾರರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದು ಶಾಸಕ ಆರ್.ನರೇಂದ್ರ ಹೇಳಿದರು.

ಪಟ್ಟಣ ಕಾಂಗ್ರೆಸ್ ಕಚೇರಿಯಲ್ಲಿ ಕರೆಯಲಾಗಿದ್ದ ಮುಖಂಡರು, ಕಾರ್ಯಕರ್ತರು, ಅಭಿಮಾನಿಗಳ ಕೃತಜ್ಞತಾ ಸಮಾರಂಭ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು 60,444 ಸಾವಿರ ಮತ ನೀಡುವ ಮೂಲಕ ನನ್ನನ್ನು ಮೂರನೇ ಬಾರಿ ಶಾಸಕನಾಗಿ ಆಯ್ಕೆ ಮಾಡಿರುವ ಕ್ಷೇತ್ರದ ಮತದಾರರಿಗೆ ನಾನು ಚಿರರುಣಿ. ಇದು ನನಗೆ ನಾಲ್ಕನೇ ಚುನಾವಣೆಯಾಗಿತ್ತು. ನಾನು ಯಾವತ್ತೂ ಹಣಕ್ಕೆ ಬೆಲೆ ಕೊಟ್ಟವನಲ್ಲ. ಮುಂದೆಯೂ ಸಹ ಕೊಡುವುದಿಲ್ಲ. ಅಂತಹ ಸಂಧರ್ಭ ಬಂದರೆ ಚುನಾವಣೆಗೆ ಸ್ಪರ್ಧಿಸುವುದಿಲ್ಲ ಎಂದು ತಿಳಿಸಿದರು. 

ಕಳೆದ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರ ಸಾಕಷ್ಟು ಅನುಧಾನ ನೀಡಿತ್ತು. ಆಗಾಗಿ ಕ್ಷೇತ್ರದಲ್ಲಿ ಹೆಚ್ಚಿನ ಅಭಿವೃದ್ದಿ ಕಾರ್ಯ ಮಾಡಲು ಸುವರ್ಣ ಯುಗವಾಗಿತ್ತು. ಐದು ವರ್ಷದ ಅಭಿವೃದ್ದಿ ಕಾರ್ಯ ನನಗೆ ತೃಪ್ತಿ ತಂದಿದೆ. ಇದೇ ತಿಂಗಳು 17 ರಂದು ಪಟ್ಟಣ ಆರ್.ಎಂ.ಸಿ. ಆವರಣದಲ್ಲಿ ಕೃತಜ್ಞತಾ ಸಮಾರಂಭ ಏರ್ಪಡಿಸಲಾಗಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಮತದಾರರು ಮುಖಂಡರು ಕಾರ್ಯಕರ್ತರು ಆಗಮಿಸುವಂತೆ ಮನವಿ ಮಾಡಿದರು.

ಇದೇ ಸಂದರ್ಭದಲ್ಲಿ ಜಿ.ಪಂ.ಅಧ್ಯಕ್ಷೆ ಶಿವಮ್ಮಕೃಷ್ಣ, ಜಿಪಂ ಸದಸ್ಯೆ ಲೇಖರವಿಕುಮಾರ್, ಹಾಲು ಒಕ್ಕೂಟ ಅಧ್ಯಕ್ಷ ಚಿಂಚಳ್ಳಿ ಗುರುಮಲ್ಲಪ್ಪ, ಪ.ಪಂ.ಅಧ್ಯಕ್ಷೆ ಮಮತಾ ಮಹದೇವು, ತಾ.ಪಂ. ಅಧ್ಯಕ್ಷ ರಾಜು, ಸದಸ್ಯ ಮಾಜಿ ಜಿ.ಪಂ. ಉಪಾಧ್ಯಕ್ಷ ಬಸವರಾಜು, ಸಾಯಿ ಸಮಿತಿ ಅಧ್ಯಕ್ಷ ಬಂಡಳ್ಳಿ ಜಾವೇದ್ ಅಹಮ್ಮದ್ ಚುನಾವಣೆ ಪ್ರಚಾರ ಸಮಿತಿ ಅಧ್ಯಕ್ಷ ಈಶ್ವರ್, ಮಾರ್ಟಳ್ಳಿ ರಾಮಲಿಂಗಂ, ಪಾಳ್ಯ ಮಂಜು ಸಿದ್ದಪ್ಪಾಜಿ ಇನ್ನಿತರರು ಇದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News