ಬಾಗೇಪಲ್ಲಿ: ಎಸೆಸೆಲ್ಸಿ ಮರು ಮೌಲ್ಯಮಾಪನದಲ್ಲಿ ಎಸ್.ಎ.ವಾಣಿಶ್ರೀಗೆ 621 ಅಂಕ

Update: 2018-06-10 18:02 GMT

ಬಾಗೇಪಲ್ಲಿ,ಜೂ.10: ಎಸೆಸೆಲ್ಸಿ ಪರೀಕ್ಷೆಯಲ್ಲಿ ಪಟ್ಟಣದ ಶಾಂತಿನಿಕೇತನ ಶಾಲೆಯ ವಿದ್ಯಾರ್ಥಿನಿ ಎಸ್.ಎ.ವಾಣಿಶ್ರೀ ಮರು ಮೌಲ್ಯಮಾಪನದಲ್ಲಿ ಸಮಾಜ ವಿಜ್ಞಾನ ವಿಷಯದಲ್ಲಿ 6 ಅಂಕಗಳಿಸುವ ಮೂಲಕ ಒಟ್ಟು 625 ಗಳಿಗೆ 621 ಅಂಕಗಳಿಸಿ ತಾಲೂಕಿನಲ್ಲಿ ಪ್ರಥಮ, ಜಿಲ್ಲೆಗೆ ತೃತೀಯ ಹಾಗೂ ರಾಜ್ಯ ಮಟ್ಟದಲ್ಲಿ 5 ನೇ ರ್ಯಾಂಕ್ ಪಡೆದಿದ್ದಾಳೆ.

ತಾಲೂಕಿನ ಸಂಗಟಪಲ್ಲಿ ಗ್ರಾಮದ ಆದಿನಾರಾಯಣರೆಡ್ಡಿ ತಾಯಿ ಲಲಿತಮ್ಮ ಎಂಬ ರೈತ ಕುಟುಂಬದಲ್ಲಿ ಜನಿಸಿರುವ ವಾಣಿಶ್ರೀ ಉತ್ತಮವಾಗಿ ಅಭ್ಯಾಸ ಮಾಡಿ ಎಸೆಸೆಲ್ಸಿ ಪರೀಕ್ಷೆಯಲ್ಲಿ ಉನ್ನತ ಸ್ಥಾನ ಪಡೆಯುವ ಮೂಲಕ ಓದಿರುವ ಶಾಲೆ, ತಂದೆ ತಾಯಿ ಹಾಗೂ ಗ್ರಾಮಕ್ಕೆ ಕೀರ್ತಿ ತಂದಿದ್ದಾರೆ.

ಕನ್ನಡದಲ್ಲಿ 125,ಇಂಗ್ಲೀಷ್-99, ಹಿಂದಿ-100, ಗಣಿತ-100, ವಿಜ್ಞಾನ-100, ಸಮಾಜ ವಿಜ್ಞಾನ-97 ಅಂಕಗಳನ್ನು ಪಡೆದಿದ್ದಾಳೆ.

10ನೇ ತರಗತಿ ಪರೀಕ್ಷೆಯಲ್ಲಿ ಉನ್ನತ ಸ್ಥಾನ ಪಡೆದ ವಿದ್ಯಾರ್ಥಿನಿ ವಾಣಿಶ್ರೀ, ಈ ಸಾಧನೆ ಮಾಡಲು ಶ್ರಮಿಸಿದ ಶಾಲೆಯ ಮುಖ್ಯ ಶಿಕ್ಷಕ ಹಾಗೂ ಸಿಬ್ಬಂದಿ ವರ್ಗದವರನ್ನು ಶಾಂತಿನಿಕೇತನ ಎಜುಕೇಷನ್ ಟ್ರಸ್ಟ್ ಅಧ್ಯಕ್ಷರು ಅಭಿನಂಧನೆಗಳನ್ನು ಸಲ್ಲಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News