ಪ್ರಗತಿಪರ ಚಿಂತಕ ಪ್ರೊ.ಮಹೇಶ್ ಚಂದ್ರಗುರುಗೆ ಗನ್ ಮ್ಯಾನ್ ಭದ್ರತೆ
Update: 2018-06-13 15:48 GMT
ಮೈಸೂರು,ಜೂ.13: ಪತ್ರಕರ್ತೆ ಗೌರಿ ಲಂಕೇಶ್ ಹಂತಕನ ಬಂಧನದ ಬೆನ್ನಲ್ಲೇ ಮತ್ತೊಬ್ಬ ಪ್ರಗತಿಪರ ಚಿಂತಕ ಪ್ರೊ.ಮಹೇಶ್ ಚಂದ್ರಗುರು ಅವರಿಗೆ ಗನೆ ಮ್ಯಾನ್ ಭದ್ರತೆ ನೀಡಲಾಗಿದೆ.
ಮೈಸೂರು ವಿಶ್ವವಿದ್ಯಾನಿಲಯದ ಪತ್ರಿಕೋದ್ಯಮ ವಿಭಾಗದ ಪ್ರೋ.ಮಹೇಶ್ ಚಂದ್ರಗುರುಗೆ ರಾಜ್ಯ ಸರ್ಕಾರ ಗನ್ ಮ್ಯಾನ್ ಭದ್ರತೆ ನೀಡಿದೆ.
ಸಾಹಿತಿ ಪ್ರೊ.ಭಗವಾನ್ ಗೆ ಈಗಾಗಲೇ ಗನ್ ಮ್ಯಾನ್ ಜೊತೆಗೆ ಮೂವರು ಪೊಲೀಸರ ಭದ್ರತೆ ಒದಗಿಸಲಾಗಿದ್ದು, ಈಗ ಮಹೇಶ್ ಚಂದ್ರಗುರುಗೆ ಭದ್ರತೆ ನೀಡಲಾಗಿದೆ.