ಭೀಮಾತೀರದ ಗಂಗಾಧರನ ನಿಗೂಢ ಹತ್ಯೆ ಪ್ರಕರಣ : ಪಿಎಸ್ಸೈ ಗೋಪಾಲ ಹಳ್ಳೂರ ಬಂಧನ

Update: 2018-06-16 15:20 GMT

ವಿಜಯಪುರ, ಜೂ. 16: ಭೀಮಾತೀರದ ಹಂತಕ ಗಂಗಾಧರನ ನಿಗೂಢ ಹತ್ಯೆ ಪ್ರಕರಣದಲ್ಲಿ ಭಾಗಿಯಾಗಿದ್ದಾರೆಂಬ ಆರೋಪದ ಹಿನ್ನೆಲೆಯಲ್ಲಿ ಚಡಚಣ ಪಿಎಸ್ಸೈ ಗೋಪಾಲ ಹಳ್ಳೂರ ಅವರನ್ನು ಪೊಲೀಸರು ಶನಿವಾರ ಬಂಧಿಸಿದ್ದಾರೆ.

ಸಿಐಡಿ ಮತ್ತು ಸ್ಥಳೀಯ ಪೊಲೀಸ್ ಅಧಿಕಾರಿಗಳು ಪಿಎಸ್ಸೈ ಗೋಪಾಲ ಹಳ್ಳೂರರನ್ನು ವಿಜಯಪುರ ಜಿಲ್ಲೆಯ ಇಂಡಿ ಪಟ್ಟಣದಲ್ಲಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಧೀಶರು ಜೂ.28ರ ವರೆಗೆ ಪಿಎಸ್ಸೈ ಹಳ್ಳೂರ ಅವರನ್ನು ನ್ಯಾಯಾಂಗ ಬಂಧನಕ್ಕೆ ಆದೇಶಿಸಿದ್ದಾರೆ.

ನ್ಯಾಯಾಲಯದ ಆದೇಶದ ಹಿನ್ನೆಲೆಯಲ್ಲಿ ಗೋಪಾಲ ಹಳ್ಳೂರರನ್ನು ವಿಜಯಪುರ ಕೇಂದ್ರ ಕಾರಾಗೃಹಕ್ಕೆ ರವಾನಿಸಲಾಗಿದೆ. ಇವರೊಂದಿಗೆ ಪೇದೆಗಳಾದ ಜಾಧವ್, ನಾಯಕ್ವಾಡಿ ಮತ್ತು ರೂಗಿ ಎಂಬವರನ್ನೂ ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ ಎಂದು ಗೊತ್ತಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News