ಹನೂರು: ಗಾಂಜಾ ಸಾಗಿಸುತ್ತಿದ್ದ ವ್ಯಕ್ತಿಯ ಬಂಧನ

Update: 2018-06-19 16:22 GMT

ಹನೂರು,ಜೂ.19: ಗಾಂಜಾ ಸೊಪ್ಪನ್ನು ಸಾಗಾಟ ಮಾಡುತ್ತಿದ್ದ ವ್ಯಕ್ತಿಯನ್ನು ಹನೂರು ಪೋಲಿಸರು ಬಂಧಿಸಿ, 550 ಗ್ರಾಂ  ಗಾಂಜಾ ಸೊಪ್ಪನ್ನು ವಶಪಡಿಸಿಕೊಂಡ ಘಟನೆ ನಡೆದಿದೆ. 

ಅರ್ಧನಾರಿಪುರ ಗ್ರಾಮದ ಸೋಲಿಗ ಜನಾಂಗದ ರಂಗಸ್ವಾಮಿ ಬಿನ್ ತಿರುಮ್ಮಯ್ಯ(32) ರಾಮಾಪುರ ಎಂಬಾತನೇ ಬಂಧಿತ ಆರೋಪಿ.

ಗುರುಮಲ್ಲಪ್ಪನದೂಡ್ಡಿ-ಅರ್ಧನಾರಿಪುರ ಮುಖ್ಯ ರಸ್ತೆಯಲ್ಲಿ ಗಾಂಜಾವನ್ನು ಸಾಗಿಸುತ್ತಿದ್ದ ಬಗ್ಗೆ ಖಚಿತ ಮಾಹಿತಿ ಮೇರೆಗೆ ಹನೂರು ಠಾಣಾ ಇನ್ಸ್‍ ಪೆಕ್ಟರ್ ಮೋಹಿತ್ ರ ತಂಡ ದಾಳಿ ನಡೆಸಿ ಆರೋಪಿಯನ್ನು ವಶಕ್ಕೆ ಪಡೆದು ಎನ್.ಡಿ.ಪಿ.ಎಸ್ ಕಾಯ್ದೆಯಡಿಯಲ್ಲಿ ಪ್ರಕರಣ ದಾಖಲಿಸಿ ಮುಂದಿನ ಕ್ರಮ ಕೈಗೂಂಡಿದ್ದಾರೆ.

ಕಾರ್ಯಚರಣೆಯ ಸಂದರ್ಭದಲ್ಲಿ ಸಿಬ್ಬಂದಿಗಳಾದ ದಪೇದಾರ್ ಸಿದ್ದೇಶ್‍ಕುಮಾರ್, ರಾಜು ಬೆಳ್ಳಿಗೌಡ, ಚಂದ್ರಶೇಖರ್ ಮತ್ತು ವೀರಭದ್ರಸ್ವಾಮಿ ಇದ್ದರು 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News