ಮಂಡ್ಯ: ಕದಂಬ ಸೈನ್ಯ ಮುಖಂಡ ಮೋಹನ್ ನಿಧನ

Update: 2018-06-19 18:08 GMT

ಮಂಡ್ಯ, ಜೂ.19: ಅನಾರೋಗ್ಯದಿಂದ ಬಳಲುತ್ತಿದ್ದ ಕದಂಬ ಸೈನ್ಯದ ತಾಲೂಕು ಅಧ್ಯಕ್ಷ ಪಿ.ಮೋಹನ್(48) ಸ್ವಗ್ರಾಮ ಶ್ರೀನಿವಾಸಪುರದಲ್ಲಿ (ಉಮ್ಮಡಹಳ್ಳಿ ಗೇಟ್) ಸೋಮವಾರ ನಿಧನರಾಗಿದ್ದಾರೆ.

ಮೋಹನ್ ಅವರಿಗೆ ಪತ್ನಿ, ಪುತ್ರ ಇದ್ದು, ಕದಂಬ ಸೈನ್ಯ ಸಂಘಟನೆಯ ಮುಖಂಡರಾಗಿ ಹಲವು ಜನಪರ ಹಾಗೂ ಕನ್ನಡಪರ ಹೋರಾಟಗಳಲ್ಲಿ ಸಕ್ರಿಯವಾಗಿ ಭಾಗಿಯಾಗಿದ್ದರು.

ಕದಂಬ ಸೈನ್ಯ ರಾಜ್ಯಾಧ್ಯಕ್ಷ ಬೇಕರಿ ರಮೇಶ್, ರಾಜ್ಯ ಸಮಿತಿ ಸದಸ್ಯ ಉಮ್ಮಡಹಳ್ಳಿ ನಾಗೇಶ್, ವಕೀಲ ರಾಜೇಗೌಡ, ಜಿಲ್ಲಾ ಕಾರ್ಯದರ್ಶಿ ಉಮ್ಮಡಹಳ್ಳಿ ಚಂದ್ರಶೇಖರ್, ಸಂಚಾಲಕ ಭಗವಾನ್, ನಗರ ಕಾರ್ಯದರ್ಶಿ ಸುನೀಲ್ ಕುಮಾರ್ ಸಂತಾಪ ಸೂಚಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News