ಹೊನ್ನಾಳಿ: ಕೆಎಸ್‍ಆರ್ ಟಿಸಿ ಬಸ್ ಅಪಘಾತ; ಚಾಲಕ ಸೇರಿ ಇಬ್ಬರು ಮೃತ್ಯು

Update: 2018-06-21 17:38 GMT

ಹೊನ್ನಾಳಿ,ಜೂ.21: ರಸ್ತೆ ಬದಿಯ ಮರಕ್ಕೆ ಕೆಎಸ್‍ಆರ್‍ಟಿಸಿ ಬಸ್ ಢಿಕ್ಕಿ ಹೊಡೆದ ಪರಿಣಾಮ ಚಾಲಕ ಹಾಗೂ ಕೆಎಸ್‍ಆರ್‍ಟಿಸಿ ಮೆಕ್ಯಾನಿಕ್ ಸ್ಥಳದಲ್ಲೇ ಮೃತಪಟ್ಟಿರುವ ದುರ್ಘಟನೆ ಗೋವಿನಕೋವಿ ಗ್ರಾಮದಲ್ಲಿ ಗುರುವಾರ ಬೆಳಿಗ್ಗೆ 6.30ರ ಸುಮಾರಿಗೆ ಸಂಭವಿಸಿದೆ.

ಪಣಜಿ-ಶಿವಮೊಗ್ಗ ಮಾರ್ಗದ ಕೆಎಸ್‍ಆರ್‍ಟಿಸಿ ಬಸ್‍ನ ಚಾಲಕ ಹಾಗೂ ನಿರ್ವಾಹಕ ರಾಥೋಡ್(45) ಹಾಗೂ ಕೆಎಸ್‍ಆರ್‍ಟಿಸಿ ಮೆಕ್ಯಾನಿಕ್ ಮಂಜುನಾಥ್(44) ಮೃತ ವ್ಯಕ್ತಿಗಳು. 

ಪಣಜಿ-ಶಿವಮೊಗ್ಗ ಮಾರ್ಗದ ಕೆಎಸ್‍ಆರ್‍ಟಿಸಿ ಬಸ್‍ನ ಚಾಲಕ ಮತ್ತು ನಿರ್ವಾಹಕನಾದ ರಾಥೋಡ್ ನಿದ್ದೆಯ ಮಂಪರಿನಲ್ಲಿದ್ದ ಕಾರಣ ಅಪಘಾತ ಸಂಭವಿಸಿದೆ ಎನ್ನಲಾಗಿದೆ. ಅಪಘಾತದಲ್ಲಿ ಬಸ್ ಮುಂಭಾಗ ನಜ್ಜುಗುಜ್ಜಾಗಿದ್ದು, ಚಾಲಕನ ಮೃತ ದೇಹ ಹೊರತೆಗೆಯಲು ಹರಸಾಹಸ ಪಡಬೇಕಾಯಿತು. ಬಸ್‍ನಲ್ಲಿದ್ದ ನಾಲ್ವರು ಪ್ರಯಾಣಿಕರಿಗೆ ಗಾಯಗಳಾಗಿದ್ದು, ಹೊನ್ನಾಳಿ ಆಸ್ಪತ್ರೆಗೆ ದಾಖಲಿಸಲಾಗಿದೆ. ನ್ಯಾಮತಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News