ಚಿಕ್ಕಮಗಳೂರು: ತಲವಾರಿನಿಂದ ಕೊಚ್ಚಿ ವ್ಯಕ್ತಿಯ ಕೊಲೆ

Update: 2018-06-22 17:31 GMT

ಚಿಕ್ಕಮಗಳೂರು,ಜೂ.22: ಚಿಕ್ಕಮಗಳೂರು ನಗರ ಬಿಜೆಪಿ ಕಾರ್ಯದರ್ಶಿ ಉಪ್ಪಳ್ಳಿ ಅನ್ವರ್ ಎಂಬವರನ್ನು ತಲವಾರಿನಿಂದ ಕೊಚ್ಚಿ ಕೊಂದ ಘಟನೆ ನಗರದ ವಿಜಯಪುರದ ಗೌರಿ ಕಾಲುವೆ ಬಳಿ, ಬಸವನಹಳ್ಳಿ ಪೊಲೀಸರು ರಾಣಾ ವ್ಯಾಪ್ತಿಯಲ್ಲಿ ಶುಕ್ರವಾರ ರಾತ್ರಿ 9:20 ರ ಸುಮಾರಿಗೆ ನಡೆದಿದೆ.

ಉಪ್ಪಳ್ಳಿ ನಿವಾಸಿಯಾಗಿರುವ ಅನ್ವರ್(34) ರನ್ನು ದುಷ್ಕರ್ಮಿಗಳು ಇರಿದು ಹತ್ಯೆಗೈದಿದ್ದು, ಗೌರಿ ಕಾಲುವೆ ಬಳಿಯ ಗುಡ್ ಮಾರ್ನಿಂಗ್ ಶಾಪ್ ಹಿಂಭಾಗ ಈ ಘಟನೆ ನಡೆದಿದೆ. ಬೈಕಿನಲ್ಲಿ ಬಂದ ಅಪರಿಚಿತರು ಈ ಕೃತ್ಯ ಎಸಗಿದ್ದಾರೆ ಎಂದು ತಿಳಿದುಬಂದಿದೆ. ಘಟನೆಗೆ ಕಾರಣ ಏನು ಎಂಬುವುದು ಇನ್ನಷ್ಟೇ ತನಿಖೆಯಿಂದ ತಿಳಿದು ಬರಬೇಕಿದೆ. ಬಸವನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News