ದಾವಣಗೆರೆ: ಚುಚ್ಚು ಮದ್ದು ನೀಡಿದ್ದರಿಂದ ಮಗು ಮೃತ್ಯು; ಪೋಷಕರ ಆರೋಪ
Update: 2018-06-24 17:03 GMT
ದಾವಣಗೆರೆ,ಜೂ.24: ಚುಚ್ಚು ಮದ್ದು ಹಾಕಿದ್ದಕ್ಕೆ ನಾಲ್ಕು ತಿಂಗಳ ಗಂಡುಮಗುವೊಂದು ಮೃತಪಟ್ಟಿದೆ ಎಂದು ಆರೋಪಿಸಿ ಮಗುವಿನ ಪೋಷಕರು ಆರೋಗ್ಯ ಇಲಾಖೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಘಟನೆ ನಗರದ ಅರುಣ ಸರ್ಕಲ್ ಬಳಿಯ ಮೈಸೂರು ಕಣದಲ್ಲಿ ಭಾನುವಾರ ನಡೆದಿದೆ.
ಇಲ್ಲಿನ ಗೀತಮ್ಮ, ಪರಶುರಾಮ್ ದಂಪತಿ ಪುತ್ರ ಜೀವನ್ಗೆ (4 ವರ್ಷ) ಶನಿವಾರ ಮಧ್ಯಾಹ್ನ ಆರೋಗ್ಯ ಇಲಾಖೆಯಿಂದ ಚುಚ್ಚು ಮದ್ದು ಹಾಕಿಸಲಾಗಿತ್ತು. ಆದರೆ, ಸಂಜೆ ವೇಳೆಗೆ ಮಗು ಸಂಪೂರ್ಣ ಅಸ್ವಸ್ಥಗೊಂಡಿದ್ದಲ್ಲದೇ, ರಾತ್ರಿ ವೇಳೆಗೆ ಮೃತಪಟ್ಟಿದೆ. ಚುಚ್ಚು ಮದ್ದು ಹಾಕಿದ್ದೇ ಮಗುವಿನ ಸಾವಿಗೆ ಕಾರಣ ಎಂದು ಪೋಷಕರ ಆರೋಪಿಸಿದ್ದು, ತಪ್ಪಿತಸ್ಥರಿಗೆ ಶಿಕ್ಷೆ ನೀಡುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.