ಮಡಿಕೇರಿ: ಎಂ.ಸಿ.ನಾಣಯ್ಯರನ್ನು ಭೇಟಿಯಾದ ಎ.ಕೆ.ಸುಬ್ಬಯ್ಯ

Update: 2018-06-27 18:09 GMT

ಮಡಿಕೇರಿ, ಜೂ.27: ಜಿಲ್ಲೆಯ ಹಿರಿಯ ರಾಜಕಾರಣಿಗಳಾದ ಎ.ಕೆ.ಸುಬ್ಬಯ್ಯ ಹಾಗೂ ಎಂ.ಸಿ.ನಾಣಯ್ಯ ಅವರು ಬುಧವಾರ ಭೇಟಿಯಾಗಿ ಪರಸ್ಪರ ಉಭಯಕುಶಲೋಪರಿ ನಡೆಸಿದರು.

ಕಳೆದ ಕೆಲವು ತಿಂಗಳುಗಳಿಂದ ಈ ಇಬ್ಬರೂ ರಾಜಕಾರಣಿಗಳು ಅನಾರೋಗ್ಯಕ್ಕೆ ಒಳಗಾಗಿದ್ದು, ಪರಸ್ಪರ ಭೇಟಿಯಾಗಲು ಅವಕಾಶ ಸಿಕ್ಕಿರಲಿಲ್ಲ. ಈ ಹಿನ್ನೆಲೆಯಲ್ಲಿ ಬುಧವಾರ ಮಡಿಕೇರಿಗೆ ಆಗಮಿಸಿದ್ದ ಸುಬ್ಬಯ್ಯ ಅವರು ಸ್ಟುವರ್ಟ್ ಹಿಲ್‍ನಲ್ಲಿರುವ ಎಂ.ಸಿ.ನಾಣಯ್ಯ ಅವರ ಮನೆಗೆ ಭೇಟಿ ನೀಡಿ ಅವರ ಆರೋಗ್ಯದ ಬಗ್ಗೆ ವಿಚಾರಿಸಿದರು.

ಸುಮಾರು ಒಂದು ಗಂಟೆಯಷ್ಟು ಕಾಲ ಅನೌಪಚಾರಿಕ ಚರ್ಚೆಯಲ್ಲಿ ತೊಡಗಿದ್ದ ಈ ಇಬ್ಬರು ರಾಜಕಾರಣಿಗಳು ಇಂದಿರಾಗಾಂಧಿಯವರ ತುರ್ತುಪರಿಸ್ಥಿತಿ ಕಾಲದಿಂದ ಇದುವರೆಗಿನ ರಾಜಕೀಯ ಬೆಳವಣಿಗೆಗಳ ಬಗ್ಗೆ ಮೆಲುಕು ಹಾಕಿದರು ಎಂದು ತಿಳಿದು ಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News