×
Ad

ಶಿವಮೊಗ್ಗ : ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ಕಳವು

Update: 2018-06-29 18:52 IST

ಶಿವಮೊಗ್ಗ, ಜೂ. 29: ಶಿವಮೊಗ್ಗ ನಗರದ ಬಿ. ಬಿ. ರಸ್ತೆಯಲ್ಲಿರುವ ಜೈನ ಧರ್ಮಕ್ಕೆ ಸೇರಿದ ಅಂಬಾಜೀ ಧಾರ್ಮಿಕ ಮಂದಿರದಲ್ಲಿ ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ಅಪಹರಿಸಿ ಕಳ್ಳರು ಪರಾರಿಯಾಗಿರುವ ಘಟನೆ ನಡೆದಿದೆ.

ಬೆಳಿಗ್ಗೆ ಮಂದಿರಕ್ಕೆ ಭಕ್ತಾಧಿಗಳು ಆಗಮಿಸಿದ ವೇಳೆ ಕಳವು ಕೃತ್ಯ ಬೆಳಕಿಗೆ ಬಂದಿದೆ. ಕಾಣಿಕೆ ಹುಂಡಿಯಲ್ಲಿದ್ದ ಚಿನ್ನಾಭರಣ, ನಗದನ್ನು ಕಳ್ಳರು ಹೊತ್ತೊಯ್ದಿದ್ದಾರೆ. ಈ ಸಂಬಂಧ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News