ಆರ್ ಟಿಐ ಕಾರ್ಯಕರ್ತ, ಸ್ನೇಹಿತನ ಗುಂಡಿಕ್ಕಿ ಹತ್ಯೆ

Update: 2018-07-02 08:39 GMT

ಪಾಟ್ನಾ, ಜು,2: ಆರ್ ಟಿಐ ಕಾರ್ಯಕರ್ತ ಹಾಗು ಆತನ ಸ್ನೇಹಿತನೊಬ್ಬನನ್ನು ನಾಲ್ವರು ಅಪರಿಚಿತರು ಗುಂಡಿಕ್ಕಿ ಕೊಲೆಗೈದ ಘಟನೆ ಬಿಹಾರದ ಜಮೂ ಜಿಲ್ಲೆಯ ಬಿಚ್ವೆ ಗ್ರಾಮದಲ್ಲಿ ನಡೆದಿದೆ.

ಆರ್ ಟಿಐ ಕಾರ್ಯಕರ್ತ ವಾಲ್ಮಿಕಿ ಯಾದವ್ ಹಾಗು ಅವರ ಸ್ನೇಹಿತನಿಗೆ ಗುಂಡಿಕ್ಕುವ ಮುನ್ನ ದುಷ್ಕರ್ಮಿಗಳು ಅವರಿಗೆ ಕಬ್ಬಿಣದ ರಾಡ್ ನಿಂದ ಹಲ್ಲೆ ನಡೆಸಿದ್ದರು ಎಂದು ಆರೋಪಿಸಲಾಗಿದೆ.

ಜಿಲ್ಲೆಯ ಸಾರ್ವಜನಿಕ ಕಲ್ಯಾಣ ಯೋಜನೆಗಳ, ಅಭಿವೃದ್ಧಿ ಕಾರ್ಯಕ್ರಮಗಳಲ್ಲಿನ ಭ್ರಷ್ಟಾಚಾರವನ್ನು ವಾಲ್ಮೀಕಿ ಯಾದವ್ ಬಯಲಿಗೆಳೆದಿದ್ದರು. ಕಳೆದ ಮೂರು ತಿಂಗಳಲ್ಲಿ ನಡೆಯುತ್ತಿರುವ ಮೂರನೆ ಘಟನೆ ಇದಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News