ಮೈಸೂರು: ಎರಡು ಕಡೆ ಕಳ್ಳತನ; ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ಲೂಟಿ

Update: 2018-07-02 16:58 GMT

ಮೈಸೂರು,ಜು.2: ನಗರದ ಎರಡು ಮನೆಗಳಲ್ಲಿ ಪ್ರತ್ಯೇಕವಾಗಿ ಕಳ್ಳರು ತಮ್ಮ ಕೈಚಳಕ ತೋರಿದ್ದು, ಲಕ್ಷಾಂತರ ರೂ.ಮೌಲ್ಯದ ಚಿನ್ನಾಭರಣಗಳನ್ನು ದೋಚಿದ್ದಾರೆ.

ಕೆ.ಆರ್.ಆಸ್ಪತ್ರೆಯ ಮುಖ್ಯರಸ್ತೆಯಲ್ಲಿರುವ ಸುರೇಶ್ ಎಂಬವರು ತಮ್ಮ ನಿವಾಸಕ್ಕೆ ಬೀಗ ಹಾಕಿ ಶನಿವಾರ ತೆರಳಿದ್ದಾಗ ಮನೆಯ ಬಾಗಿಲು ಮುರಿದ ಕಳ್ಳರು ಕಳ್ಳತನ ಮಾಡಿದ್ದಾರೆ. 3.84 ಲಕ್ಷರೂ. ಮೌಲ್ಯದ ವಿವಿಧ ಮಾದರಿಯ ಆಭರಣಗಳನ್ನು ಕಳ್ಳರು ಕದ್ದೊಯ್ದಿದ್ದಾರೆ ಎನ್ನಲಾಗಿದ್ದು, ಈ ಕುರಿತು ಲಷ್ಕರ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇನ್ನೊಂದು ಪ್ರಕರಣದಲ್ಲಿ ವಿಜಯನಗರದ ನಾಲ್ಕನೇ ಹಂತದಲ್ಲಿ ವೇದಾವತಿ ಎಂಬವರು ಬೇರೆ ಊರಿಗೆ ತೆರಳಿದ ಸಂದರ್ಭದಲ್ಲಿ ಶುಕ್ರವಾರ ಮನೆಯ ಹಿಂಬಾಗಿಲನ್ನು ಮೀಟಿ ಒಳನುಗ್ಗಿದ ಕಳ್ಳರು ಚಿನ್ನದ ಸರ, ಕಿವಿಯೋಲೆ, ಬೆಳ್ಳಿ ಬಟ್ಟಲು, ಬೆಳ್ಳಿಯ ಚೆಂಬು, ಬೆಳ್ಳಿಯ ಕೀಚೈನ್, ಎಲ್ ಇಡಿ ಟಿವಿಯನ್ನು ಕದ್ದೊಯ್ದಿದ್ದಾರೆ. ಈ ಕುರಿತು ವಿಜಯನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News