ಪ್ರೇಮ ವಿವಾಹಕ್ಕೆ ಜಾತಿ ಅಡ್ಡಿ: ಮನನೊಂದು ಯುವಕ ಆತ್ಮಹತ್ಯೆ

Update: 2018-07-03 17:46 GMT

ತುಮಕೂರು,ಜು.03:ಪ್ರೇಮ ವಿವಾಹಕ್ಕೆ ಜಾತಿ ಅಡ್ಡಿಯಾಗಿದ್ದರಿಂದ ಮನನೊಂದ ಯುವಕ ಮನೆಯಲ್ಲಿಯೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಇಲ್ಲಿನ ಕ್ಯಾತ್ಸಂದ್ರದಲ್ಲಿ ತಡರಾತ್ರಿ ನಡೆದಿದೆ.

ಕ್ಯಾತ್ಸಂದ್ರದ ವಾಸಿ ರಾಘವೇಂದ್ರ(26) ಎಂಬಾತನೇ ಆತ್ಮಹತ್ಯೆಗೆ ಶರಣಾಗಿರುವ ಯುವಕ. ಆಚಾರ್ ಸಮುದಾಯಕ್ಕೆ ಸೇರಿದ ರಾಘವೇಂದ್ರ ಬ್ರಾಹ್ಮಣ ಸಮುದಾಯಕ್ಕೆ ಸೇರಿದ್ದ ಯುವಕನಾಗಿದ್ದಾನೆ. ಆತ ತುರುವೇಕೆರೆ ಮೂಲದ ಯುವತಿಯನ್ನು ಕಳೆದ 5 ವರ್ಷದಿಂದ ಪ್ರೀತಿಸುತ್ತಿದ್ದ. ಆದರೆ ಇವರಿಬ್ಬರ ಮದುವೆಗೆ ಯುವತಿಯ ತಂದೆ ಜಾತಿ ನೆಪವೊಡ್ಡಿ ನಿರಾಕರಿಸಿದ್ದರೆನ್ನಲಾಗಿದೆ. ಹಲವು ಬಾರಿ ಮನವೊಲಿಸುವ ಪ್ರಯತ್ನ ನಡೆಸಿ, ರಾಘವೇಂದ್ರ ವಿಫಲರಾಗಿದ್ದರು. ಇದರಿಂದ ಮನನೊಂದು ಯುವಕ ತನ್ನ ಮನೆಯಲ್ಲಿಯೇ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಹೇಳಿಕೊಂಡ ವಿಡಿಯೋವನ್ನು ಫೇಸ್‍ಬುಕ್‍ನಲ್ಲಿ ಅಪ್‍ಲೋಡ್ ಮಾಡಿ, ನಂತರ ಆತ್ಮಹತ್ಯೆಗೆ ಶರಣಾಗಿದ್ದಾನೆ ಎನ್ನಲಾಗಿದೆ.

ಜಾತಿ ಜಾತಿ ಎದು ಏಕೆ ಸಾಯಿತ್ತೀರಾ, ಸತ್ತ ಮೇಲೆ ಜಾತಿ ಹೊತ್ಕೊಂಡ್ ಹೋಗ್ತಿರಾ. ನಾನಿನ್ನು ನಿನ್ನ ಮಗಳ ತಂಟೆಗೆ ಬರೋಲ್ಲ. ಅವಳು ಚೆನ್ನಾಗಿರಲಿ ಎಂದು ಫೇಸ್‍ಬುಕ್‍ನಲ್ಲಿ ಅಪ್‍ಲೋಡ್ ಮಾಡಿರುವ ವಿಡಿಯೋದಲ್ಲಿ ಯುವಕ ಹೇಳಿದ್ದಾನೆ.

ಘಟನೆಯ ಸುದ್ದಿ ತಿಳಿದ ಕೂಡಲೇ ಕ್ಯಾತ್ಸಂದ್ರ ಠಾಣೆ ಪೊಲೀಸರು ಸ್ಥಳಕ್ಕ ಧಾವಿಸಿ ಪರಿಶೀಲಿಸಿ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News