ಮದುವೆ ದಿನವೇ ಪ್ರಿಯಕರನ ಜೊತೆ ಪರಾರಿಯಾದ ವಧು

Update: 2018-07-08 18:37 GMT

ಮೈಸೂರು,ಜು.8: ಮದುವೆ ದಿನವೇ ಮದುಮಗಳು ತನ್ನ ಪ್ರಿಯಕರನ ಜೊತೆ ಓಡಿ ಹೋದ ಘಟನೆ ಮೈಸೂರಿನಲ್ಲಿ ನಡೆದಿದೆ.

ಹೆಚ್.ಡಿ ಕೋಟೆ ತಾಲೂಕಿನ ತಾಯಮ್ಮ ಮತ್ತು ಕೃಷ್ಣನಾಯಕ ಎಂಬವರ ಪುತ್ರಿ ನಂದಿನಿ ನವಜೀವನಕ್ಕೆ ಕಾಲಿಡುತ್ತಿದ್ದ ಸಂಭ್ರಮದಲ್ಲಿದ್ದ ವರನ ಆಸೆಗೆ ತಣ್ಣೀರೆರಚಿದ ವಧು. ಬಲವಂತವಾಗಿ ಮದುವೆಗೆ ಒಪ್ಪಿಸಿದ ಪರಿಣಾಮ ಮದುವೆ ದಿನವೇ ನಂದಿನಿ ಪರಾರಿಯಾಗಿದ್ದಾಳೆ. ಬೆಳಗ್ಗೆ ತಾಳಿ ಕಟ್ಟಲು ಎಲ್ಲ ಸಿದ್ಧತೆ ನಡೆದಿದ್ದು, ಅಷ್ಟರಲ್ಲಿ ವಧು ಪ್ರಿಯಕರನೊಂದಿಗೆ ಪರಾರಿಯಾಗಿದ್ದಾಳೆ ಎನ್ನಲಾಗಿದೆ. 

ನಂದಿನಿಗೆ ಮಾರ್ಬಳ್ಳಿ ಗ್ರಾಮದ ನಾರಾಯಣ ಜೊತೆ ಮದುವೆ ನಡೆಯಬೇಕಿತ್ತು. ರಾತ್ರಿಯೆಲ್ಲಾ ಮದುವೆ ಸಿದ್ಧತೆ ಮಾಡಿಕೊಳ್ಳಲಾಗಿತ್ತು. ಕಲ್ಯಾಣಮಂಟಪಕ್ಕೂ ಸಹ ಬಂದಿದ್ದಳು. ಕೆಲವು ಶಾಸ್ತ್ರಗಳಲ್ಲೂ ಭಾಗವಹಿಸಿದ್ದಳು. ಅಲ್ಲದೇ ಬೆಳಿಗ್ಗೆ ಹಸೆಮಣೆ ಏರಲು ಸಿದ್ಧವಾಗಿದ್ದಳು. ಇನ್ನೇನು ತಾಳಿ ಕಟ್ಟಲು ಕೆಲ ಕ್ಷಣಗಳು ಇರುವಾಗ ಎಲ್ಲರ ಕಣ್ತಪ್ಪಿಸಿ ಕಲ್ಯಾಣ ಮಂಟಪದಿಂದ ಪರಾರಿಯಾಗಿದ್ದಾಳೆ ಎನ್ನಲಾಗಿದೆ. 

6 ತಿಂಗಳ ಹಿಂದೆ ನಂದಿನಿ ಹಾಗೂ ನಾರಾಯಣ ನಡುವೆ ನಿಶ್ಚಿತಾರ್ಥ ನಡೆದಿತ್ತು. ನಿಶ್ಚಿತಾರ್ಥದ ಸಂದರ್ಭದಲ್ಲಿ ಮದುವೆ ಇಷ್ಟವಿಲ್ಲವೆಂದು ಪೋಷಕರಿಗೆ ಯುವತಿ ತಿಳಿಸಿದ್ದು, ಆದರೆ ಮಗಳ ಮಾತನ್ನು ಲೆಕ್ಕಿಸದ ಹೆತ್ತವರು ಬಲವಂತವಾಗಿ ಮದುವೆಗೆ ಒಪ್ಪಿಸಿದ್ದರು ಎನ್ನಲಾಗಿದೆ. ಅಂದಿನಿಂದಲೂ ಮದುವೆ ಬಗ್ಗೆ ಅಸಮಾಧಾನ ವ್ಯಕ್ತಪಡಿಸುತ್ತಾ ಬಂದಿದ್ದ ಯುವತಿ ಮದುವೆ ದಿನವೇ ಪರಾರಿಯಾಗಿದ್ದಾಳೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News