ಜಗಳೂರು: ಎಸಿಬಿ ಬಲೆಗೆ ಬಿದ್ದ ಗ್ರಾಮ ಲೆಕ್ಕಾಧಿಕಾರಿ

Update: 2018-07-12 18:02 GMT

ಜಗಳೂರು, ಜು.12: ಜಮೀನಿನ ಖಾತೆ ಬದಲಾವಣೆ ಮಾಡಿ ಕೊಡಲು ಲಂಚ ಪಡೆದ ಗ್ರಾಮ ಲೆಕ್ಕಾಧಿಕಾರಿಯೊಬ್ಬರು ಎಸಿಬಿ ಬಲೆಗೆ ಬಿದ್ದಿದ್ದಾರೆ.

ದಾವಣಗೆರೆ ನಗರದ ನಿವಾಸಿ ಶ್ರೀಶೈಲ ಪ್ರಕಾಶ್ ಅವರಿಗೆ ಸೇರಿದ 3 ಎಕರೆ 33 ಗುಂಟೆ ಜಮೀನು ಜಗಳೂರು ತಾಲೂಕಿನ ಉದ್ದಗಟ್ಟ ಗ್ರಾಮದ ಸ.ನಂ. 34/1ರಲ್ಲಿದ್ದು ಈ ಜಮೀನಿನ ಖಾತೆ ಬದಲಾವಣೆ ಮಾಡಲು ಭರಮಸಮುದ್ರ ಫಿರ್ಕಾದ ಗ್ರಾಮ ಲೆಕ್ಕಾಧಿಕಾರಿ ವಿಷ್ಣು ಹಾಗೂ ಗ್ರಾಮ ಸಹಾಯಕ ಹನುಮಂತಪ್ಪ ಎಂಬುವವರು 4 ಸಾವಿರ ಲಂಚದ ಬೇಡಿಕೆ ಇಟ್ಟಿದ್ದರು ಎನ್ನಲಾಗಿದೆ.

ಬೆಸ್ಕಾಂ ಇಲಾಖೆಯ ಪಕ್ಕದ ಶೆಟ್ಟರ ಬಿಲ್ಡಿಂಗ್‌ನಲ್ಲಿ ಸದರಿ ಲಂಚದ ಹಣದಲ್ಲಿ 3 ಸಾವಿರ ಹಣವನ್ನು ಸ್ವೀಕರಿಸುವಾಗ ಎಸಿಬಿ ಡಿವೈಎಸ್ಪಿ ಪರಮೇಶ್ವರ್ ಹಾಗೂ ತಂಡ ದಾಳಿ ನಡೆಸಿ ಆರೋಪಿತರನ್ನು ದಸ್ತಗಿರಿ ಮಾಡಿ ವಿಚಾರಣೆಗೊಳಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News