ಚಾಮರಾಜನಗರ: ಚೆಸ್ಕಾಂ ಅಧಿಕಾರಿಗಳ ಎದುರೇ ವಿಷ ಕುಡಿಯಲು ಯತ್ನಿಸಿದ ರೈತ

Update: 2018-07-12 18:13 GMT

ಚಾಮರಾಜನಗರ,ಜು.12: ಚೆಸ್ಕಾಂ ಅಧಿಕಾರಿಗಳ ವಿಳಂಬ ನೀತಿಗೆ ಬೇಸತ್ತ ರೈತ, ಅಧಿಕಾರಿಗಳ ಮುಂದೆ ವಿಷದ ಬಾಟಲ್ ಹಿಡಿದು ಕುಡಿಯುವ ಬೆದರಿಕೆಯೊಡ್ಡಿದ ಘಟನೆ ಜಿಲ್ಲೆಯ ಹನೂರಿನಲ್ಲಿ ನಡೆದಿದೆ.

ಮೀಟರ್ ಅಳವಡಿಕೆ ಮಾಡಿಕೊಡದ ಚೆಸ್ಕಾಂ ಸಿಬ್ಬಂದಿ ವಿರುದ್ಧ ರಾಮಾಪುರದ ರೈತ ಮುತ್ತಪ್ಪ ಆಕ್ರೋಶ ವ್ಯಕ್ತಪಡಿಸಿ, ಅಕ್ರಮ-ಸಕ್ರಮ ಯೋಜನೆಯಡಿ ಮೀಟರ್ ಅಳವಡಿಸಲು ವಿನಾಃ ಚೆಸ್ಕಾಂ ಅಧಿಕಾರಿಗಳು ವಿಳಂಬ ಮಾಡುತ್ತಿದ್ದಾರೆ ಎಂದು ಆರೋಪಿಸಿ ಚೆಸ್ಕಾಂ ಕಚೇರಿಯಲ್ಲಿ ವಿಷದ ಬಾಟಲಿ ಹಿಡಿದು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಈ ವೇಳೆ ಕಚೇರಿ ಒಳಗೆ ಅಧಿಕಾರಿಗಳ ಎದುರೇ ವಿಷದ ಬಾಟಲ್ ಹಿಡಿದು ವಿಷ ಕುಡಿಯಲು ಯತ್ನಿಸಿದ ರೈತ ಮುತ್ತಪ್ಪರ ನಡವಳಿಕೆಯಿಂದ ಚೆಸ್ಕಾಂ ಅಧಿಕಾರಿಗಳು ಆತಂಕಕ್ಕೊಳಗಾದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News