ಚಾಮರಾಜನಗರ: ರೈಲ್ವೇ ಮೇಲ್ಸೇತುವೆ ತಡೆಗೋಡೆಗೆ ಬೈಕ್ ಢಿಕ್ಕಿ; ಯುವಕ ಮೃತ್ಯು
Update: 2018-07-13 16:17 GMT
ಚಾಮರಾಜನಗರ,ಜು.13 : ರೈಲ್ವೇ ಮೇಲ್ಸೇತುವೆ ತಡೆ ಗೋಡೆಗೆ ಬೈಕ್ ಢಿಕ್ಕಿ ಹೊಡೆದ ಪರಿಣಾಮ ಓರ್ವ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಚಾಮರಾಜನಗರ ತಾಲೂಕಿನ ಮರಿಯಾಲ ಗ್ರಾಮದ ಬಳಿ ನಡೆದಿದೆ.
ಚಾಮರಾಜನಗರ ರೈಲ್ವೇ ಮೇಲ್ಸೇತುವೆ ಬಳಿ ಘಟನೆ ನಡೆದಿದ್ದು, 24 ವರ್ಷದ ರಮೇಶ್ ಮೃತ ವ್ಯಕ್ತಿ. ರಮೇಶ್ ಕೋಣನೂರು ಪಾಳ್ಯ ನಿವಾಸಿಯಾಗಿದ್ದು, ಮಳೆ ಬೀಳುತ್ತಿದ್ದ ಕಾರಣ ತಲೆ ಬಗ್ಗಿಸಿಕೊಂಡು ಹೋಗುತ್ತಿದ್ದು, ಈ ವೇಳೆ ಸೇತುವೆಗೆ ಢಿಕ್ಕಿ ಹೊಡೆದಿದೆ. ಸೇತುವೆ ಗೋಡೆಗೆ ಢಿಕ್ಕಿ ಹೊಡೆದ ರಭಸಕ್ಕೆ 70 ಅಡಿ ಆಳಕ್ಕೆ ಬಿದ್ದು ಮೃತರಾಗಿದ್ದಾರೆ. ಚಾಮರಾಜನಗರ ಸಂಚಾರಿ ಪೊಲೀಸರು ಭೇಟಿ ನೀಡಿ ಪ್ರಕರಣ ದಾಖಲಿಸಿದ್ದಾರೆ.