ಸೋಮವಾರಪೇಟೆ: ತೀವ್ರ ಮಳೆಗೆ ವಿವಿಧೆಡೆ ಮನೆಗಳಿಗೆ ಹಾನಿ

Update: 2018-07-14 11:58 GMT

ಸೋಮವಾರಪೇಟೆ,ಜು.14: ತಾಲೂಕಿನಾದ್ಯಂತ ಬೆಳಗ್ಗಿನಿಂದ ಮಳೆಯ ಕಡಿಮೆಯಾಗಿದ್ದರೂ, ಮದ್ಯಾಹ್ನದ ನಂತರ ಮತ್ತೆ ಬಿರುಸುಗೊಂಡ ಹಿನ್ನೆಲೆಯಲ್ಲಿ ಪಟ್ಟಣದ ವಲ್ಲಭಬಾಯಿ ಬಡಾವಣೆ ನಿವಾಸಿ ಬಿ.ಎನ್.ರಘು ಎಂಬವರ ಮನೆಯ ಹಿಂಭಾಗದ ಗೋಡೆ ಬಿರುಕು ಬಿಟ್ಟು ಕುಸಿದು ಬಿದ್ದಿದ್ದು, ಆದರೆ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. 

ಐಗೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಕಾಜೂರು ಗ್ರಾಮದ ಲೀಲಾವತಿ ಎಂಬುವರ ಮನೆಯು ಗಾಳಿ, ಮಳೆಗೆ ಕುಸಿದು ಸಂಪೂರ್ಣ ಹಾನಿಯಾಗಿದೆ. ತೋಳೂರು ಶೆಟ್ಟಳ್ಳಿಯ ಗ್ರಾಮದ ಭಾಗ್ಯ ರಾಮ ಎಂಬುವರ ಮನೆಯ ಒಂದು ಪಾರ್ಶ್ವ ಕುಸಿದು ಬಿದ್ದಿದೆ. ಗರ್ವಾಲೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಕಿಕ್ಕರಳ್ಳಿ ಗ್ರಾಮದ ಎ.ಯು.ಕಾರ್ಯಪ್ಪ ಎಂಬುವರ ವಾಸದ ಮನೆಯ ಮೇಲೆ ಮರವೊಂದು ಬಿದ್ದು ಸಾವಿರಾರು ರೂ. ನಷ್ಟ ಸಂಭವಿಸಿದೆ. ಸೋಮವಾರಪೇಟೆ-ಕುಶಾಲನಗರ ಮುಖ್ಯರಸ್ತೆಯಲ್ಲಿ ಮರವೊಂದು ರಸ್ತೆಗಡ್ಡಲಾಗಿ ಬಿದ್ದ ಪರಿಣಾಮ ಬೇಳೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಕಾರೆಕೊಪ್ಪದ ಬಳಿ ಒಂದು ಗಂಟೆಗಳ ಕಾಲ ರಸ್ತೆ ಸಂಚಾರ ಅಸ್ತವ್ಯಸ್ತಗೊಂಡಿತ್ತು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News