ಸಾಗರ: ದಂಪತಿ ಆತ್ಮಹತ್ಯೆಗೆ ಯತ್ನ; ಪತಿ ಮೃತ್ಯು, ಪತ್ನಿ ಸ್ಥಿತಿ ಗಂಭೀರ

Update: 2018-07-16 18:19 GMT

ಸಾಗರ, ಜು.16: ಇಲ್ಲಿನ ಜೆ.ಪಿ.ನಗರ ಕತ್ತಲೆ ಬಜಾರ್‌ನಲ್ಲಿ ದಂಪತಿಗಳಿಬ್ಬರು ಆತ್ಮಹತ್ಯೆಗೆ ಯತ್ನಿಸಿದ ಘಟನೆ ರವಿವಾರ ನಡೆದಿದ್ದು ಪತಿ ಸಾವನ್ನಪ್ಪಿದ್ದು, ಪತ್ನಿ ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾರೆ.

ಕತ್ತಲೆ ಬಜಾರ್‌ನಲ್ಲಿ ವೆಲ್ಡಿಂಗ್ ಕೆಲಸ ಮಾಡುತ್ತಿದ್ದ ರೂಪೇಶ್ (28) ಮೃತ ವ್ಯಕ್ತಿಯಾಗಿದ್ದಾನೆ. ರೂಪೇಶ್ ಮತ್ತು ಸ್ವಾತಿಗೆ ದಂಪತಿಗೆ 6 ತಿಂಗಳ ಗಂಡು ಮಗುವಿದೆ.

ರವಿವಾರ ರೂಪೇಶ್ ತೆಗೆದುಕೊಂಡ ಟವೆರಾ ಕಾರಿನಲ್ಲಿ ದೇವಸ್ಥಾನಗಳಿಗೆ ಕುಟುಂಬಸ್ಥರು ಹೋಗಿ ಬಂದಿದ್ದಾರೆ. ಸಂಜೆ 6ಗಂಟೆ ಸುಮಾರಿಗೆ ಗಂಡ, ಹೆಂಡತಿ  ನಡುವೆ ಸಣ್ಣಪುಟ್ಟ ವಿಷಯಕ್ಕೆ ಜಗಳ ನಡೆದಿದೆ ಎನ್ನಲಾಗಿದ್ದು, ತಕ್ಷಣ ಗಂಡ ಹೆಂಡತಿ ಇಬ್ಬರೂ ರೂಮಿನ ಬಾಗಿಲು ಬಂದ್ ಮಾಡಿಕೊಂಡಿದ್ದಾರೆ. ಗಂಡ ಹೆಂಡತಿ ಇಬ್ಬರೂ ರೂಮಿನ ಬಾಗಿಲು ಹಾಕಿಕೊಂಡಿದ್ದರಿಂದ ಮನೆಯಲ್ಲಿದ್ದ ರೂಪೇಶ್‌ನ ತಂದೆ, ತಾಯಿ ಮತ್ತು ಅಣ್ಣ ರೂಮಿನ ಬಾಗಿಲು ತೆಗೆದು ಒಳಗೆ ಹೋಗಿ ನೋಡಿದಾಗ ಇಬ್ಬರೂ ಒಂದೇ ಸೀರೆಯಲ್ಲಿ ತೊಲೆಗೆ ನೇಣು ಹಾಕಿಕೊಂಡಿದ್ದರು. ತಕ್ಷಣ ಇಬ್ಬರನ್ನೂ ಕೆಳಗೆ ಇಳಿಸಿ ಉಪವಿಭಾಗೀಯ ಆಸ್ಪತ್ರೆಗೆ ಕರೆ ತರಲಾಯಿತು.

ಆಸ್ಪತ್ರೆಯಲ್ಲಿ ರೂಪೇಶ್ ಮೃತಪಟ್ಟಿದ್ದಾರೆ. ರೂಪೇಶ್ ಪತ್ನಿ ಸ್ವಾತಿ ಅವರಿಗೆ ಪ್ರಥಮ ಚಿಕಿತ್ಸೆ ನೀಡಿ ಶಿವಮೊಗ್ಗ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚೇತರಿಸಿಕೊಳ್ಳುತ್ತಿದ್ದಾರೆ. ಈ ಸಂಬಂಧ ರೂಪೇಶ್ ಕುಟುಂಬದವರು ನಗರ ಠಾಣೆಗೆ ದೂರು ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News