ಮಂಡ್ಯ: ಪುತ್ರನನ್ನು ಭೇಟಿಯಾಗಲು ಬಂದಿದ್ದ ತಂದೆಗೆ ಥಳಿಸಿದ ಗುಂಪು
Update: 2018-07-19 11:45 GMT
ಮಂಡ್ಯ, ಜು.19: ತನ್ನ ಪುತ್ರನನ್ನು ಭೇಟಿಯಾಗಲು ಬಂದಿದ್ದ ವ್ಯಕ್ತಿಯೊಬ್ಬನನ್ನು 'ಮಕ್ಕಳ ಕಳ್ಳ' ಎಂದು ಶಂಕಿಸಿ ಗುಂಪೊಂದು ಹಲ್ಲೆ ನಡೆಸಿರುವ ಘಟನೆ ಮಂಡ್ಯದಲ್ಲಿ ನಡೆದಿದೆ ಎಂದು ವರದಿಯಾಗಿದೆ.
ಹಲ್ಲೆಗೊಳಗಾದ ವ್ಯಕ್ತಿ ವಿಚ್ಛೇದಿತನಾಗಿ ತನ್ನ ಜೊತೆ ಬರುವಂತೆ ಪುತ್ರನನ್ನು ಕರೆಯಲು ಬಂದಿದ್ದ ಎನ್ನಲಾಗಿದೆ. ಆದರೆ ಬಾಲಕ ತಂದೆಯ ಜೊತೆ ತೆರಳಲು ನಿರಾಕರಿಸಿದ್ದು, ಇದನ್ನು ಕಂಡ ಸ್ಥಳೀಯರು ಈತ ಮಕ್ಕಳ ಕಳ್ಳನಿರಬೇಕು ಎಂದು ಶಂಕಿಸಿದ್ದಾರೆ. ನಂತರ ಆತನ ಮೇಲೆ ಹಲ್ಲೆ ನಡೆಸಿದ್ದಾರೆ.
ಮಕ್ಕಳಿಗೆ ಚಾಕೊಲೆಟ್ ನೀಡಿದ್ದ ಯುವಕನನ್ನು ಮಕ್ಕಳ ಕಳ್ಳ ಎಂದು ಶಂಕಿಸಿದ್ದ ಗುಂಪೊಂದು ಯುವಕನೊಬ್ಬನನ್ನು ಹೊಡೆದು ಕೊಂದ ಘಟನೆ ಇತ್ತೀಚೆಗಷ್ಟೇ ಬೀದರ್ ನಲ್ಲಿ ನಡೆದಿತ್ತು.