ಉಚಿತ ಬಸ್ ಪಾಸ್ ಕೊಡುತ್ತೇನೆಂದು ನಾನು ಹೇಳಿಲ್ಲ: ಮುಖ್ಯಮಂತ್ರಿ ಕುಮಾರಸ್ವಾಮಿ

Update: 2018-07-21 14:33 GMT

ಬೆಂಗಳೂರು, ಜು. 21: ‘ರಾಜ್ಯದಲ್ಲಿನ ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ಕೊಡುತ್ತೇನೆ ಎಂದು ನಾನು ಎಲ್ಲಿಯೂ ಹೇಳಿರಲಿಲ್ಲ’ ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ಸ್ಪಷ್ಟಪಡಿಸಿದ್ದಾರೆ.

ಶನಿವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ವಿಧಾನಸಭಾ ಚುನಾವಣೆ ವೇಳೆ ನಾನು ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ನೀಡುತ್ತೇನೆಂದು ಹೇಳಿರಲಿಲ್ಲ. ಹೀಗಿರುವಾಗ ಉಚಿತ ಬಸ್ ಪಾಸ್ ನೀಡುವ ಪ್ರಶ್ನೆ ಉಧ್ಬವಿಸದು ಎಂದು ತಿಳಿಸಿದರು.

ಶ್ರೀಮಂತ ರಾಷ್ಟ್ರ ಎಲ್ಲಿ: ಪ್ರಧಾನಿ ಮೋದಿ ಅವರು ದೇಶ ಪ್ರಗತಿ ಹೊಂದುತ್ತಿದ್ದು, ಶ್ರೀಮಂತಿಕೆಯಲ್ಲಿ ವಿಶ್ವದದಲ್ಲೆ ಆರನೆ ಸ್ಥಾನದಲ್ಲಿದೆ ಎಂದು ಹೇಳುತ್ತಾರೆ. ಆದರೆ, ದೇಶದ ಜನತೆ ಎಲ್ಲದಕ್ಕೂ ಸಬ್ಸಿಡಿ ಕೊಡಿ ಎಂದರೆ ಹೇಗೆ ಸಾಧ್ಯ. ಆದರೆ, ಮೋದಿ ಹೇಳಿದಂತೆ ಶ್ರೀಮಂತರ ರಾಷ್ಟ್ರವಾಗಿದೆಯೇ ಎಂದು ನಾನು ಆಲೋಚಿಸುತ್ತಿದ್ದೇನೆ ಎಂದು ಟೀಕಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News