ಮಡಿಕೇರಿ: ಹುಲಿದಾಳಿಗೆ ಹಸು ಬಲಿ

Update: 2018-07-22 14:18 GMT

ಮಡಿಕೇರಿ, ಜು.22: ಹಾಡಹಗಲೇ ಹುಲಿ ದಾಳಿಗೆ ಹಸುವೊಂದು ಬಲಿಯಾದ ಘಟನೆ ವಿರಾಜಪೇಟೆ ತಾಲೂಕಿನ ಅವರೆಗುಂದ ಗ್ರಾಮದಲ್ಲಿ ನಡೆದಿದೆ.

ಅವರೇಗುಂದ ಗ್ರಾಮದ ನಿವಾಸಿ ವೈ.ಕೆ ಮಾದ ಎಂಬವರು ತಮಗೆ ಸೇರಿದ ಎರಡು ಹಸುವನ್ನು ಮೇಯಲು ಬಿಟ್ಟ ಸಂದರ್ಭ ಒಂದು ಹಸುವಿನ ಮೇಲೆ ಹುಲಿ ದಾಳಿ ಮಾಡಿ ಕೊಂದು ಹಾಕಿದೆ. ಜೊತೆಯಲ್ಲಿದ್ದ ಮತ್ತೊಂದು ಹಸು ಪ್ರಾಣಪಾಯದಿಂದ ಪಾರಾಗಿದೆ. ಹಸುವಿನ ಮೌಲ್ಯ 40 ಸಾವಿರ ರೂ. ಆಗಿದ್ದು, ಹಾಲು ಮಾರಿ ಜೀವನ ಸಾಗಿಸುತ್ತಿದ್ದ ಕುಟುಂಬ ಸಂಕಷ್ಟಕ್ಕೆ ಸಿಲುಕಿದೆ. ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಹುಲಿಯ ಚಲನವಲನ ಗಮನಿಸಲು ಕ್ಯಾಮೆರಾ ಅಳವಡಿಸಿದ್ದಾರೆ.

ಹುಲಿ ದಾಳಿಯಿಂದ ಗ್ರಾಮಸ್ಥರಲ್ಲಿ  ಆತಂಕ ಮೂಡಿದ್ದು, ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ.
ದಕ್ಷಿಣ ಕೊಡಗಿನ ಕೆಲವು ಗ್ರಾಮಗಳಲ್ಲಿ ನಾಯಿ ಹಾಗೂ ಹಂದಿಗಳ ಮೇಲೂ ಹುಲಿ ದಾಳಿ ಮಾಡಿರುವ ಘಟನೆ ನಡೆದಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News