ಯಡಿಯೂರಪ್ಪ ಬಗ್ಗೆ ಅಚ್ಚರಿಯ ಹೇಳಿಕೆ ನೀಡಿದ ಕೆಜೆಪಿ ಅಧ್ಯಕ್ಷ ಪ್ರಸನ್ನಕುಮಾರ್

Update: 2018-07-22 16:37 GMT

ಮೈಸೂರು,ಜು.22: ನಮ್ಮ ಪಕ್ಷದ ಗಾಡ್‍ಫಾದರ್ ಬಿ.ಎಸ್.ಯಡಿಯೂರಪ್ಪ. ಅವರು ಕೊಟ್ಟ ಭಿಕ್ಷೆಯೇ ಕೆಜೆಪಿ ಪಕ್ಷ ಎಂದು ಕೆಜೆಪಿ ಪಕ್ಷದ ಸಂಸ್ಥಾಪಕ ಅಧ್ಯಕ್ಷ ಪದ್ಮನಾಭ ಪ್ರಸನ್ನಕುಮಾರ್ ಅಚ್ಚರಿಯ ಹೇಳಿಕೆ ನೀಡಿದರು.

ನಗರದ ಪತ್ರಕರ್ತರ ಭವನದಲ್ಲಿ ರವಿವಾರ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಈ ಹಿಂದೆ ಬಿ.ಎಸ್.ಯಡಿಯೂಪ್ಪನವರಿಗೂ ನಮಗೂ ಕೆಲವು ವಿಚಾರದಲ್ಲಿ ಭಿನ್ನಾಭಿಪ್ರಾಗಳಿದ್ದವು. ಈಗ ಎಲ್ಲವೂ ಬಗೆಹರಿದಿದ್ದು, ಅವರೇ ನಮ್ಮ ಪಕ್ಷದ ಗಾಡ್‍ಫಾದರ್. ಅವರು ಕೊಟ್ಟ ಭಿಕ್ಷೆಯೇ ಈ ಕೆಜೆಪಿ ಪಕ್ಷ. ನಿನಗೆ ಉತ್ತಮ ಭವಿಷ್ಯವಿದೆ ಎಂದು ಯಡಿಯೂರಪ್ಪ ಹೇಳಿದ್ದಾರೆ. ನಿನ್ನ ಜೊತೆ ನಾನಿದ್ದೇನೆ ಎಂದು ಭರವಸೆ ನೀಡಿದ್ದಾರೆ ಎಂದು ಹೇಳುವ ಮೂಲಕ ಎಲ್ಲರನ್ನು ಆಶ್ಚರ್ಯಗೊಳಿಸಿದ್ದಾರೆ.

ಕೆಜಿಪಿ ಪಕ್ಷವನ್ನು ರಾಜ್ಯದಲ್ಲಿ ಬಲಪಡಿಸಲಾಗುತ್ತಿದ್ದು, ಪಕ್ಷದ ನೂತನ ಕಚೇರಿಯನ್ನು ಮೈಸೂರಿನಲ್ಲಿ ತೆರೆಯಲಾಗುತ್ತಿದೆ. ಮೈಸೂರಿನ ಅಗ್ರಹಾರದ ನಟರಾಜ ಕಾಲೇಜಿನ ಎಡಭಾಗದಲ್ಲಿ ಕೆಜೆಪಿ ಪಕ್ಷದ ನೂತನ ಕಚೇರಿಯನ್ನು ತೆರೆಯಲಾಗುತ್ತದೆ ಎಂದು ಹೇಳಿದರು.

ಶಿರೂರು ಶ್ರೀಗಳ ಅಸಹಜ ಸಾವು ಪ್ರಕರಣ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಪದ್ಮನಾಭ ಪ್ರಸನ್ನಕುಮಾರ್, ಈ ಬಗ್ಗೆ ಸರಕಾರ ಸೂಕ್ತ ತನಿಖೆ ಮಾಡಿಸಬೇಕು. ಇದು ಸಹಜ ಸಾವಲ್ಲ, ಕೊಲೆ. ಈ ಬಗ್ಗೆ ಮುಖ್ಯಮಂತ್ರಿಗಳಿಗೆ ಪತ್ರ ಬರೆಯುತ್ತೇನೆ. ಸಮಗ್ರ ತನಿಖೆ ಮಾಡುವಂತೆ ಒತ್ತಾಯ ಮಾಡುತ್ತೇನೆ. ಬುಧವಾರ ನಾನೇ ಸ್ವತಹ ಪತ್ರ ಬರೆದು ತನಿಖೆಗೆ ಒತ್ತಾಯಿಸುತ್ತೇನೆ. ರಾಜ್ಯ ಸರಕಾರ ಕೃಷ್ಣಮಠವನ್ನು ತನ್ನ ಸುಪರ್ದಿಗೆ ಪಡೆಯಲಿ ಎಂದು ಮನವಿ ಮಾಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News