ಬಸ್-ಕಾರು ಢಿಕ್ಕಿ: ಇಬ್ಬರು ಸಜೀವ ದಹನ

Update: 2018-07-22 18:00 GMT

ಬೆಂಗಳೂರು: ಬಸ್ ಮತ್ತು ಕಾರು ಢಿಕ್ಕಿ ಹೊಡೆದು ಕಾರಿನಲ್ಲಿದ್ದ ಇಬ್ಬರು ಸಜೀವ ದಹನವಾಗಿರುವ ಘಟನೆ ಸೂರ್ಯನಗರ ಪೋಲಿಸ್ ಠಾಣೆಯ ವ್ಯಾಪ್ತಿಯ ಹೆನ್ನಾಗರ ಗೇಟ್ ಬಳಿ ನಡೆದಿದೆ. ಬೆಂಗಳೂರಿನಿಂದ ಹೊಸೂರು ಕಡೆಗೆ ತೆರಳುತ್ತಿದ್ದ ಕಾರು ಡಿವೈಡರ್‌ಗೆ ಢಿಕ್ಕಿ ಹೊಡೆದು ನಂತರ ಬಸ್‌ಗೆ ಗುದ್ದಿದ ಪರಿಣಾಮ ಕಾರು ಮತ್ತು ಬಸ್‌ಗೆ ಬೆಂಕಿ ತಗುಲಿದೆ. ಕಾರು ಮತ್ತು ಬಸ್ ಸಂಪೂರ್ಣ ಭಸ್ಮವಾಗಿವೆ. ಕಾರು ಬೆಂಕಿಗೆ ಭಸ್ಮವಾದ ಕಾರಣ ಕಾರಿನ ಸಂಖ್ಯೆ ಹಾಗೂ ಮೃತರ ಗುರುತು ಪತ್ತೆಯಾಗಿಲ್ಲ. ಬಸ್ ಗ್ರೀನ್ ಲೈನ್ ಟ್ರಾವೆಲ್ಸ್ಗೆ ಸೇರಿದ್ದು, ಬಸ್‌ನಲ್ಲಿದ್ದ 19 ಪ್ರಯಾಣಿಕರಿಗೆ ಯಾವುದೇ ಪ್ರಾಣ ಹಾನಿಯಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor