ಮೈತ್ರಿ ಸರಕಾರದ ವಿರುದ್ಧ ಹೇಳಿಕೆ: ಮಾಜಿ ಸ್ಪೀಕರ್ ಕೋಳಿವಾಡ, ಕೆ.ಎನ್.ರಾಜಣ್ಣಗೆ ಕೆಪಿಸಿಸಿ ನೋಟಿಸ್

Update: 2018-07-23 14:26 GMT
ಕೆ.ಎನ್.ರಾಜಣ್ಣ, ಕೆ.ಬಿ. ಕೋಳಿವಾಡ, 

ಬೆಂಗಳೂರು, ಜು. 23: ‘ಮುಖ್ಯಮಂತ್ರಿ ಕಣ್ಣೀರು ಹಾಕಲು ಕೆಲ ಕಾಂಗ್ರೆಸ್ ನಾಯಕರು ಕಾರಣ ಹಾಗೂ ಮೈತ್ರಿ ಸರಕಾರಕ್ಕೆ ಅಯುಷ್ಯವಿಲ್ಲ’ ಎಂಬ ಹೇಳಿಕೆಗಳನ್ನು ನೀಡುವ ಮೂಲಕ ಪಕ್ಷಕ್ಕೆ ತೀವ್ರ ಮುಜುಗರ ಸೃಷ್ಟಿಸಿದ್ದ ಮಾಜಿ ಸ್ಪೀಕರ್ ಕೆ.ಬಿ. ಕೋಳಿವಾಡ ಮತ್ತು ಮಾಜಿ ಶಾಸಕ ಕೆ.ಎನ್.ರಾಜಣ್ಣ ಅವರಿಗೆ ಕಾರಣ ಕೇಳಿ ಕೆಪಿಸಿಸಿ ನೋಟಿಸ್ ಜಾರಿ ಮಾಡಿದೆ.

ಸೋಮವಾರ ಉಭಯ ನಾಯಕರಿಗೆ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ವಿ.ವೈ.ಘೋರ್ಪಡೆ, ತಮ್ಮ ಈ ನಡವಳಿಕೆ ಪಕ್ಷ ವಿರೋಧಿ ಚಟುವಟಿಕೆಯಾಗಿದ್ದು, ಗಂಭೀರವಾಗಿ ಪರಿಗಣಿಸಲಾಗಿದೆ. ಪಕ್ಷದ ತತ್ವ-ಸಿದ್ಧಾಂತಕ್ಕೆ ವಿರುದ್ಧ ನಡೆದುಕೊಂಡಿದ್ದು, ಶಿಸ್ತು ಕ್ರಮ ಕೈಗೊಳ್ಳಬೇಕಾಗುತ್ತೆ. ಈ ಬಗ್ಗೆ ತಾವು ಒಂದು ವಾರದಲ್ಲಿ ಸಮಜಾಯಿಷಿಯನ್ನು ನೀಡಬೇಕು. ತಪ್ಪಿದಲ್ಲಿ ತಮ್ಮ ಮೇಲೆ ಮುಂದಿನ ಅಗತ್ಯ ಶಿಸ್ತು ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಇಬ್ಬರು ನಾಯಕರಿಗೆ ನೀಡಿರುವ ನೋಟಿಸ್‌ನಲ್ಲಿ ಎಚ್ಚರಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News