ಚಿಕ್ಕಮಗಳೂರು: ರಾಜ್ಯ ಯುವ ಬರಹಗಾರರ ಒಕ್ಕೂಟದ ಜಿಲ್ಲಾಧ್ಯಕರಾಗಿ ಪೃಥ್ವಿಸೂರಿ ಆಯ್ಕೆ

Update: 2018-07-28 18:12 GMT

ಚಿಕ್ಕಮಗಳೂರು, ಜು.28: ರಾಜ್ಯ ಯುವ ಬರಹಗಾರರ ಒಕ್ಕೂಟದ ಚಿಕ್ಕಮಗಳೂರು ಜಿಲ್ಲಾ ಘಟಕದ ಅಧ್ಯಕ್ಷರಾಗಿ ಅಜ್ಜಂಪುರ ಜಿ. ಸೂರಿಯವರ ಮೊಮ್ಮಗನಾದ ಪೃಥ್ವಿಸೂರಿ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಒಕ್ಕೂಟದ ಸಂಸ್ಥಾಪಕಾಧ್ಯಕ್ಷ ಹೂಹಳ್ಳಿನಾಗರಾಜ್ ತಿಳಿಸಿದ್ದಾರೆ

ಯುವ ಬರಹಗಾರರ ಒಕ್ಕೂಟದಿಂದ ಜಿಲ್ಲೆಯ ಯುವ ಬರಹಗಾರರಿಗೆ ಕಥಾಕಮ್ಮಟ, ಕಾವ್ಯಕಮ್ಮಟ ಮತ್ತು ಕವಿಗೋಷ್ಠಿ ಆಯೋಜಿಸುವುದು ಹಾಗೂ ಸಾಹಿತ್ಯ, ಸಂಘಟನೆಗಳ ವಿಷಯ ಕುರಿತಂತೆ ಚಿಂತನ-ಮಂಥನ ಏರ್ಪಡಿಸುವುದು ಇದರ ಮುಖ್ಯ ಉದ್ದೇಶವಾಗಿದೆ ಎಂದು ಅವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News