ನೂತನ ಜಿಲ್ಲಾ ಉಸ್ತುವಾರಿ ಸಚಿವರ ನೇಮಕ
ಬೆಂಗಳೂರು, ಜು.31: ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರಕಾರದ ಜಿಲ್ಲಾ ಉಸ್ತುವಾರಿ ಸಚಿವರ ನೇಮಕ ಸಾಕಷ್ಟು ಕುತೂಹಲಕ್ಕೆ ಕಾರಣವಾಗಿತ್ತು. ಈ ಹಿನ್ನೆಲೆಯಲ್ಲಿ ಸಾಕಷ್ಟು ಅಳೆದು ತೂಗಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಸಂಪುಟದ ಸಚಿವರಿಗೆ ಜಿಲ್ಲಾ ಉಸ್ತುವಾರಿ ಜವಾಬ್ದಾರಿಯನ್ನು ವಹಿಸಲಾಗಿದೆ.
ಡಾ.ಜಿ.ಪರಮೇಶ್ವರ್-ಬೆಂಗಳೂರು ನಗರ ಮತ್ತು ತುಮಕೂರು, ಆರ್.ವಿ.ದೇಶಪಾಂಡೆ-ಉತ್ತರ ಕನ್ನಡ ಮತ್ತು ಧಾರವಾಡ, ಡಿ.ಕೆ.ಶಿವಕುಮಾರ್-ರಾಮನಗರ ಮತ್ತು ಬಳ್ಳಾರಿ, ಕೆ.ಜೆ.ಜಾರ್ಜ್-ಚಿಕ್ಕಮಗಳೂರು, ರಮೇಶ್ ಜಾರಕಿಹೊಳಿ-ಬೆಳಗಾವಿ, ಶಿವಾನಂದ ಪಾಟೀಲ್-ಬಾಗಲಕೋಟೆ, ಪ್ರಿಯಾಂಕ್ ಖರ್ಗೆ-ಕಲಬುರಗಿ,
ರಾಜಶೇಖರ ಬಿ. ಪಾಟೀಲ್-ಯಾದಗಿರಿ, ವೆಂಕಟರಮಣಪ್ಪ-ಚಿತ್ರದುರ್ಗ ಎನ್.ಎಚ್.ಶಿವಶಂಕರ ರೆಡ್ಡಿ-ಚಿಕ್ಕಬಳ್ಳಾಪುರ, ಕೃಷ್ಣ ಭೈರೇಗೌಡ-ಬೆಂಗಳೂರು ಗ್ರಾಮಾಂತರ ಮತ್ತು ಕೋಲಾರ, ಯು.ಟಿ.ಖಾದರ್-ದಕ್ಷಿಣ ಕನ್ನಡ, ಸಿ.ಪುಟ್ಟರಂಗಶೆಟ್ಟಿ-ಚಾಮರಾಜನಗರ, ಝಮೀರ್ ಅಹ್ಮದ್-ಹಾವೇರಿ, ಜಯಮಾಲ-ಉಡುಪಿ, ಆರ್.ಶಂಕರ್-ಕೊಪ್ಪಳ,
ಎನ್.ಮಹೇಶ್-ಗದಗ, ವೆಂಕಟರಾವ್ ನಾಡಗೌಡ-ರಾಯಚೂರು, ಎಸ್.ಆರ್.ಶ್ರೀನಿವಾಸ್-ದಾವಣಗೆರೆ, ಸಿ.ಎಸ್.ಪುಟ್ಟರಾಜು-ಮಂಡ್ಯ, ಸಾ.ರಾ.ಮಹೇಶ್-ಕೊಡಗು, ಬಂಡೆಪ್ಪ ಕಾಶೆಂಪುರ್-ಬೀದರ್, ಎಚ್.ಡಿ.ರೇವಣ್ಣ-ಹಾಸನ, ಡಿ.ಸಿ.ತಮ್ಮಣ್ಣ-ಶಿವಮೊಗ್ಗ, ಎಂ.ಸಿ.ಮನಗೂಳಿ-ಬಿಜಾಪುರ, ಜಿ.ಟಿ.ದೇವೇಗೌಡ-ಮೈಸೂರು