ಮಂಡ್ಯ: ಇಬ್ಬರು ಬಾಲಕರು ನಾಪತ್ತೆ; ಅಪಹರಣ ಶಂಕೆ

Update: 2018-08-02 17:05 GMT

ಮಂಡ್ಯ, ಆ.2: ಇಲ್ಲಿನ ಅರ್ಕೇಶ್ವರ ನಗರ ಗುತ್ತಲು ಬಡಾವಣೆಯಲ್ಲಿ 15 ವರ್ಷದ ಯೋಗಾನಂದ ಹಾಗೂ 13 ವರ್ಷದ ಎಂ.ಚೇತನ್‍ಕುಮಾರ್ ಎಂಬ ಇಬ್ಬರು ಬಾಲಕರು ನಾಪತ್ತೆಯಾಗಿದ್ದು, ಬಾಲಕರು ಅಪಹರಣವಾಗಿದ್ದಾರೆಂದು ಶಂಕಿಸಿ ನಗರದ ಪೂರ್ವ ಠಾಣೆಗೆ ದೂರು ನೀಡಲಾಗಿದೆ.

ಯೋಗಾನಂದ 4.6 ಅಡಿ ಎತ್ತರ, ಎಣ್ಣೆಗೆಂಪು ಬಣ್ಣ, ಕೋಲುಮುಖ, ಸಾಧಾರಣ ಶರೀರ ಹೊಂದಿದ್ದು, ನೀಲಿ ಬಣ್ಣದ ಶರ್ಟ್, ಸಿಮೆಂಟ್ ಬಣ್ಣದ ಪ್ಯಾಂಟ್ ಧರಿಸಿದ್ದಾನೆ. ಚೇತನ್‍ ಕುಮಾರ್ 3.6 ಅಡಿ ಎತ್ತರ, ಕಪ್ಪು ಬಣ್ಣ, ದುಂಡುಮುಖ, ಸಾಧಾರಣ ಶರೀರ ಹೊಂದಿದ್ದು, ಕೆಂಪು ನೀಲಿ ಬಣ್ಣದ ಬಟ್ಟೆ ಧರಿಸಿದ್ದಾನೆ.
ಹೆಚ್ಚಿನ ಮಾಹಿತಿ ಹಾಗೂ ಬಾಲಕರ ಬಗ್ಗೆ ಮಾಹಿತಿ ಇದ್ದರೆ ಪೂರ್ವ ಠಾಣೆಯನ್ನು ಸಂಪರ್ಕಿಸಲು ಕೋರಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News