ಮಂಡ್ಯ: ಮರಕ್ಕೆ ಬೈಕ್ ಢಿಕ್ಕಿ; ಸವಾರ ಸ್ಥಳದಲ್ಲೇ ಮೃತ್ಯು

Update: 2018-08-05 14:58 GMT

ಮಂಡ್ಯ, ಆ.5: ಮರಕ್ಕೆ ಬೈಕ್ ಢಿಕ್ಕಿಯೊಡೆದು ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ಮದ್ದೂರು ತಾಲೂಕಿನ ಕೊಪ್ಪ ಸಮೀಪ ಎನ್‍ಎಸ್‍ಎಲ್ ಕಾರ್ಖಾನೆ ಬಳಿ ಶನಿವಾರ ತಡರಾತ್ರಿ ನಡೆದಿದೆ.

ಮದ್ದೂರು ಗೊಲ್ಲರದೊಡ್ಡಿ ಗ್ರಾಮದ ಶಿವಲಿಂಗಯ್ಯ ಅವರ ಪುತ್ರ ರಾಜೇಶ್(33) ಮೃತಪಟ್ಟ ವ್ಯಕ್ತಿಯಾಗಿದ್ದು, ಈತನಿಗೆ ಪತ್ನಿ ವಿದ್ಯಾಶ್ರೀ ಹಾಗೂ ನಾಲ್ಕು ವರ್ಷದ ನಿಶ್ಚಿತ್ ಎಂಬ ಪುತ್ರನಿದ್ದಾನೆ.

ಮೃತನು ಬೆಂಗಳೂರಿನ ಪೆಟ್ರೋಲ್ ಬಂಕ್‍ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದು, ಪ್ರತಿನಿತ್ಯ ಸ್ವಗ್ರಾಮಕ್ಕೆ ಬಂದು ತೆರಳುತ್ತಿದ್ದನೆನ್ನಲಾಗಿದೆ. ಕೊಪ್ಪ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News