ಮೈಸೂರು: ಬಿಎಸ್‍ಎನ್‍ಎಲ್ ನೌಕರ ಆತ್ಮಹತ್ಯೆ

Update: 2018-08-06 15:37 GMT

ಮೈಸೂರು,ಆ.6: ಹೊಟ್ಟೆನೋವಿನಿಂದ ಬಳಲುತ್ತಿದ್ದ ಬಿಎಸ್ ಎನ್ ಎಲ್ ನೌಕರರೋರ್ವರು ತನ್ನ ನಿವಾಸದಲ್ಲಿ ನೇಣು ಬಿಗಿದು ಆತ್ಮಹತ್ಯೆಗೆ ಶರಣಾದ ಘಟನೆ ಕುವೆಂಪುನಗರ ಕೆ.ಬ್ಲಾಕ್ ನಲ್ಲಿ ನಡೆದಿದೆ.

ಮೃತರನ್ನು ಕುವೆಂಪುನಗರ ಕೆ.ಬ್ಲಾಕ್ ನಿವಾಸಿ ಲಿಂಗರಾಜು(55)ಎಂದು ಗುರುತಿಸಲಾಗಿದ್ದು, ಇವರು ಶನಿವಾರ ತನ್ನ ಪತ್ನಿಯನ್ನು ತವರಿಗೆ ಕಳುಹಿಸಿದ್ದರು. ಇಂದು ಬೆಳಿಗ್ಗೆ ಮಗನನ್ನು ಹೊರಗೆ ಯಾವುದೋ ಸಾಮಗ್ರಿ ತರಲು ತಿಳಿಸಿ ಆತ ಹೊರ ಹೋದ ನಂತರ ತನ್ನ ರೂಮಿನಲ್ಲಿ ನೇಣು ಬಿಗಿದು ಆತ್ಮಹತ್ಯೆಗೆ ಶರಣಾಗಿದ್ದಾರೆ. ಮಗ ಮನೆಗೆ ಮರಳಿದಾಗ ತಂದೆ ಆತ್ಮಹತ್ಯೆ ಮಾಡಿಕೊಂಡಿರುವುದು ತಿಳಿದು ಬಂದಿದೆ. ಅವರು ಹೊಟ್ಟೆನೋವಿನಿಂದ ಬಳಲುತ್ತಿದ್ದರು ಎನ್ನಲಾಗಿದೆ.

ಸ್ಥಳಕ್ಕೆ ಅಶೋಕಪುರಂ ಠಾಣೆಯ ಇನ್ಸ್ ಪೆಕ್ಟರ್ ಸಿದ್ದರಾಜು, ಸಿಬ್ಬಂದಿಗಳಾದ ಮಹಾದೇವ್, ಆನಂದ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ಅಶೋಕಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News