ತಲ್ವಾರ್ ದಂಪತಿಗೆ ಮತ್ತೆ ಸಂಕಷ್ಟ

Update: 2018-08-10 08:40 GMT

ಹೊಸದಿಲ್ಲಿ, ಆ.10: ಆರುಷಿ ತಲ್ವಾರ್ ಹಾಗು ಹೇಮರಾಜ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ತಲ್ವಾರ್ ದಂಪತಿಯನ್ನು ಬಿಡುಗಡೆಗೊಳಿಸಿದ್ದ ಅಲಹಾಬಾದ್ ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ಸಿಬಿಐ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ಅಂಗೀಕರಿಸಿದೆ.

ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ಸಿಬಿಐ ಈ ವರ್ಷದ ಮೇ ತಿಂಗಳಲ್ಲಿ ಅರ್ಜಿ ಸಲ್ಲಿಸಿತ್ತು. ಹೇಮರಾಜ್ ಪತ್ನಿ ಸಲ್ಲಿಸಿದ ಅರ್ಜಿಯ ಜೊತೆ ಈ ಅರ್ಜಿಯ ವಿಚಾರಣೆ ನಡೆಸಲಾಗುವುದು ಎಂದು ರಂಜನ್ ಗೊಗೊಯಿ, ನವೀನ್ ಸಿನ್ಹಾ ಮತ್ತು ಕೆ.ಎಂ.ಜೋಸೆಫ್ ರನ್ನೊಳಗೊಂಡಿದ್ದ ನ್ಯಾಯಪೀಠ ತಿಳಿಸಿದೆ.

2017 ಅಕ್ಟೋಬರ್ ನಲ್ಲಿ ತೀರ್ಪು ನೀಡಿದ್ದ ಹೈಕೋರ್ಟ್ ರಾಜೇಶ್-ನೂಪುರ್ ತಲ್ವಾರ್ ದಂಪತಿಯನ್ನು ಬಿಡುಗಡೆಗೊಳಿಸಿ ತೀರ್ಪು ನೀಡಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News