ತೋಟಗಾರಿಕೆ ಇಲಾಖೆ ಅಧಿಕಾರಿ ಎಸಿಬಿ ಬಲೆಗೆ

Update: 2018-08-10 13:21 GMT

ಶಿವಮೊಗ್ಗ, ಆ. 10: ಜಿಲ್ಲೆಯ ಭದ್ರಾವತಿಯ ತೋಟಗಾರಿಕಾ ಇಲಾಖೆ ಅಧಿಕಾರಿ ನಂಜೇಗೌಡರವರು ವ್ಯಕ್ತಿಯೋರ್ವರಿಂದ ಲಂಚ ಸ್ವೀಕರಿಸುವ ವೇಳೆ ಭ್ರಷ್ಟಾಚಾರ ನಿಗ್ರಹ ದಳ (ಎ.ಸಿ.ಬಿ.) ದ ಬಲೆಗೆ ಬಿದ್ದಿರುವ ಘಟನೆ ವರದಿಯಾಗಿದೆ. 

ಭದ್ರಾವತಿ ತಾಲೂಕಿನ ಅಂತರಗಂಗೆ ಗ್ರಾಮದ ರೈತ ಭಾಗ್ಯರಾಜ್ ಎಂಬುವರಿಗೆ ಹನಿ ನೀರಾವರಿ ಯೋಜನೆಯಡಿ 24 ಸಾವಿರ ರೂ. ಸಹಾಯಧನ ಮಂಜೂರಾಗಿತ್ತು. ಇದನ್ನು ಬಿಡುಗಡೆ ಮಾಡಬೇಕಾದರೆ 3000 ರೂ. ನೀಡಬೇಕೆಂದು ನಂಜೇಗೌಡರವರು ಡಿಮ್ಯಾಂಡ್ ಮಾಡಿದ್ದರು. ಈ ಕುರಿತಂತೆ ಭಾಗ್ಯರಾಜ್‍ರವರು ಎಸಿಬಿ ಪೊಲೀಸರಿಗೆ ದೂರು ನೀಡಿದ್ದರು. 

ಎಸಿಬಿ ಪೊಲೀಸರ ನಿರ್ದೇಶನದಂತೆ ಭಾಗ್ಯರಾಜ್‍ರವರು 2500 ರೂ.ಗಳನ್ನು ನೀಡಿದ್ದಾರೆ. ಇದನ್ನು ಸ್ವೀಕರಿಸುತ್ತಿದ್ದಂತೆ ನಂಜೇಗೌಡರನ್ನು ಎಸಿಬಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಅವರ ವಿರುದ್ದ ಭ್ರಷ್ಟಾಚಾರ ನಿಯಂತ್ರಣ ಕಾಯ್ದೆಯಡಿ ದೂರು ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News