ಮಳೆಗೆ ಕೇರಳ ತತ್ತರ: 54 ಸಾವಿರ ಮಂದಿ ನಿರಾಶ್ರಿತರು

Update: 2018-08-10 18:00 GMT

ಕೊಚ್ಚಿ, ಆ.10: ಕೇರಳದಲ್ಲಿ ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಕುಂಭದ್ರೋಣ ಮಳೆ ನಿಲ್ಲುವ ಲಕ್ಷಣಗಳು ಕಾಣುತ್ತಿಲ್ಲ. ಈ ಮಧ್ಯೆ ಶುಕ್ರವಾರ ಕೂಡಾ ಎಡೆಬಿಡದೆ ಮಳೆ ಸುರಿದಿದ್ದು ಇಡುಕ್ಕಿ ಜಲಾಶಯದ ಭಾಗವಾಗಿರುವ ಚೆರು ತೋನಿ ಅಣೆಕಟ್ಟಿನ ಇನ್ನೆರಡು ದ್ವಾರಗಳನ್ನು ತೆರೆಯಲಾಗಿದೆ. ರಾಜ್ಯದಲ್ಲಿ 54,000 ಮಂದಿ ನಿರಾಶ್ರಿತರಾಗಿದ್ದು ಮಳೆಯ ರುದ್ರ ನರ್ತನಕ್ಕೆ ಮೃತಪಟ್ಟವರ ಸಂಖ್ಯೆ 29ಕ್ಕೇರಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor