‘ಸನಾತನ ಸಂಸ್ಥೆಯನ್ನು ಭಯೋತ್ಪಾದಕ ಸಂಸ್ಥೆಯೆಂದು ಘೋಷಿಸಿ’

Update: 2018-08-11 13:31 GMT

ಬೆಂಗಳೂರು, ಆ. 11: ‘ಸನಾತನ ಸಂಸ್ಥೆಯನ್ನು ಭಯೋತ್ಪಾದಕ ಸಂಸ್ಥೆಯೆಂದು ಘೋಷಿಸಬೇಕು. ಸನಾತನ ಸಂಸ್ಥೆಯ ಎಲ್ಲ ಚಟುವಟಿಕೆಗಳನ್ನು ನಿಷೇಧಿಸಬೇಕು. ಸನಾತನ ಸಂಸ್ಥೆ ನಾಯಕರನ್ನು ಬಂಧಿಸಿ, ಅದರ ರಾಜಕೀಯ-ಆರ್ಥಿಕ ವ್ಯವಹಾರಗಳ ಬಗ್ಗೆ ಸಮಗ್ರ ತನಿಖೆಯಾಗಬೇಕು’ ಎಂದು ಆಗ್ರಹಿಸಿ ಆ.30ರಿಂದ ಸೆಪ್ಟಂಬರ್ 5ರ ವರೆಗೆ ಅಭಿವ್ಯಕ್ತಿ ಹತ್ಯಾ ವಿರೋಧಿ ಸಪ್ತಾಹ ಹಮ್ಮಿಕೊಳ್ಳಲಾಗಿದೆ.

ಆ.30ಕ್ಕೆ ಧಾರವಾಡದಲ್ಲಿ ಸಪ್ತಾಹ ಉದ್ಘಾಟನೆ ನಡೆಯಲಿದೆ. ಗಾಂಧಿಯನ್ನು ಕೊಂದವರೇ ಗೌರಿಯನ್ನು ಕೊಂದಿದ್ದಾರೆ. ಪತ್ರಕರ್ತೆ ಗೌರಿ ಲಂಕೇಶ್ ಅವರನ್ನು ಕೊಂದವರೇ ಸಂಶೋಧಕ ಡಾ.ಕಲ್ಬುರ್ಗಿಯವರನ್ನು ಕೊಂದಿರುವುದು ಸ್ಪಷ್ಟವಾಗಿದೆ. ಹಂತಕರನ್ನು ಮಾತ್ರವಲ್ಲ, ಹುನ್ನಾರ ರೂಪಿಸಿದವರನ್ನೂ ಬಂಧಿಸಿ. ಕೊಲೆಗಾರರನ್ನು ಮಾತ್ರವಲ್ಲ, ಕೊಲೆಗಡುಕ ಸಂಘಟನೆಗಳನ್ನೂ ನಿರ್ಬಂಧಿಸಿ ಎಂದು ಆಗ್ರಹಿಸಲಾಗಿದೆ.

ಸೆಪ್ಟಂಬರ್ 5ಕ್ಕೆ ರಾಜಭವನ ಚಲೋ: ‘ಮೋದಿ ಮೋದಿ ಮೋದಿ ನಮ್ಮ ಸರದಿ ಯಾವಾಗ’ ಎಂಬ ಘೋಷಣೆಯಡಿ ಸೆ.5ರಂದು ರಾಜಭವನ ಚಲೋ ಹಮ್ಮಿಕೊಳ್ಳಲಾಗಿದೆ. ಸ್ವಾಮಿ ಅಗ್ನಿವೇಶ್ ಮತ್ತು ರವೀಶ್ ಕುಮಾರ್ ಚಲೋ ನಡೆಯಲಿದೆ. ಅದೇ ದಿನ ಮಧ್ಯಾಹ್ನ ಅಭಿವ್ಯಕ್ತಿ ಸ್ವಾತಂತ್ರ ಸಮ್ಮೇಳನ ನಡೆಯಲಿದೆ ಎಂದು ಗೌರಿ ಲಂಕೇಶ್ ಬಳಗದ ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News