ಮೈಸೂರು: ರಸ್ತೆ ಅಪಘಾತಕ್ಕೆ ಬೈಕ್ ಸವಾರ ಬಲಿ
Update: 2018-08-11 17:28 GMT
ಮೈಸೂರು,ಆ.11: ನಗರದ ಬನ್ನಿಮಂಟಪದ ಹೈವೇ ವೃತ್ತದ ಬಳಿ ಬೈಕೊಂದು ಆಟೋಗೆ ಢಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ನಡೆದಿದೆ.
ಮೃತರನ್ನು ಬನ್ನಿಮಂಟಪದ ನಿವಾಸಿ ಚಂದನ್(20) ಎಂದು ಗುರುತಿಸಲಾಗಿದ್ದು, ಹಿಂಬದಿ ಸವಾರ ಶ್ರೀರಂಗಪಟ್ಟಣ ತಾಲ್ಲೂಕಿನ ಕಲ್ಮಂಟಿ ನಿವಾಸಿ ನಿಖಿಲ್(20) ತೀವ್ರವಾಗಿ ಗಾಯಗೊಂಡಿದ್ದಾರೆ.
ಚಂದನ್ ತನ್ನ ಸ್ನೇಹಿತ ನಿಖಿಲ್ ಜೊತೆ ಬಂಬೂಬಜಾರ್ ನಿಂದ ಬನ್ನಿಮಂಟಪದ ಕಡೆ ಪಲ್ಸರ್ ಬೈಕ್ನಲ್ಲಿ ಬರುತ್ತದ್ದಾಗ ಹುಂಡೈ ಶೋರಂ ಬಳಿ ಎದುರಿನಿಂದ ಬಂದ ಆಟೋಗೆ ಢಿಕ್ಕಿ ಹೊಡೆದಿದ್ದಾರೆ. ಇದರಿಂದ ಇಬ್ಬರ ತಲೆಗೂ ಗಂಭೀರ ಸ್ವರೂಪದ ಗಾಯಗಳಾಗಿದ್ದು, ಸ್ಥಳದಲ್ಲೇ ಚಂದನ್ ಮೃತಪಟ್ಟಿದ್ದಾರೆ. ನಿಖಿಲ್ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಈ ಸಂಬಂಧ ಎನ್.ಆರ್.ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.